Select Your Language

Notifications

webdunia
webdunia
webdunia
webdunia

ಕರುವಿನ ಹೊಟ್ಟೆ, ರುಂಡ ಕತ್ತರಿಸಿದ ಚಿರತೆ

ಕರುವಿನ ಹೊಟ್ಟೆ, ರುಂಡ ಕತ್ತರಿಸಿದ ಚಿರತೆ
ಮಂಡ್ಯ , ಬುಧವಾರ, 30 ಅಕ್ಟೋಬರ್ 2019 (15:07 IST)
ಚಿರತೆಯೊಂದು ಕರುವಿನ ತಲೆ ಕತ್ತರಿಸಿ ತಿಂದು ಹೋಗಿರೋದು ಅಲ್ಲಿನ ಜನರು ಬೆಚ್ಚಿ ಬೀಳುವಂತೆ ಮಾಡಿದೆ.

ಮಂಡ್ಯದ ಮಾವಿನಕಟ್ಟೆಕೊಪ್ಪಲು ಗ್ರಾಮದಲ್ಲಿ  ಎಮ್ಮೆ ಕರು ಮೇಲೆ ಚಿರತೆ ದಾಳಿ ನಡೆಸಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಮಂಡ್ಯ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗ್ರಾಮದ ಪುಟ್ಟನರಸಮ್ಮ ಎಂಬುವರಿಗೆ ಸೇರಿದ ಎಮ್ಮೆ ಕರು ಮೇಲೆ ರಾತ್ರಿ ಚಿರತೆ ದಾಳಿ ಮಾಡಿದೆ. ಕರುವಿನ ಹೊಟ್ಟೆಯ ಭಾಗ ಮತ್ತು ಕುತ್ತಿಗೆ ಭಾಗವನ್ನು ತಿಂದು ಹೋಗಿದೆ.
ಬೆಳಿಗ್ಗೆ ಎಂದಿನಂತೆ ತಮ್ಮ ಕೊಟ್ಟಿಗೆಯಲ್ಲಿ ಹೋಗಿ ನೋಡಿದಾಗ ಎಮ್ಮೆಯ ಕರು ಸತ್ತು ಬಿದ್ದಿರುವುದನ್ನು ಕಂಡು ಅರಣ್ಯ ಅಧಿಕಾರಿಗಳಿಗೆ ಮನೆ ಮಂದಿ ದೂರು ನೀಡಿದ್ದಾರೆ.

ಅಧಿಕಾರಿಗಳು  ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.  ಬೋನನ್ನು ಇರಿಸಿ ಚಿರತೆಯನ್ನು ಸೆರೆ ಹಿಡಿಯುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ.

ಮಾವಿನಕಟ್ಟೆ ಕೊಪ್ಪಲು ಗ್ರಾಮದಲ್ಲಿ ಚಿರತೆ ನಡೆಸುತ್ತಿರೋದು ಮೂರನೇ ದಾಳಿಯಾಗಿದೆ.  




Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಯುಕ್ತ ಖಡಕ್ ಆದೇಶ