Publish Date: Wed, 30 Oct 2019 (14:59 IST)
Updated Date: Wed, 30 Oct 2019 (15:00 IST)
ಎಲ್ಲ ವಾಣಿಜ್ಯ ಮತ್ತು ಉದ್ದಿಮೆಗಳಿಗೆ ಅಳವಡಿಸಿರುವ ನಾಮ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಿ ಪ್ರದರ್ಶಿಸಬೇಕು. ಹೀಗಂತ ಪಾಲಿಕೆ ಆಯುಕ್ತ ಖಡಕ್ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿನಗರ ವ್ಯಾಪ್ತಿಯ ಎಲ್ಲ ವಾಣಿಜ್ಯ ಮತ್ತು ಉದ್ದಿಮೆಗಳಿಗೆ ಅಳವಡಿಸಿರುವ ನಾಮ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಿ ಪ್ರದರ್ಶಿಸಬೇಕೆಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಆದೇಶಿಸಿದ್ದಾರೆ.
ಕನ್ನಡ ರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೆ ಕನ್ನಡ ಬಳಕೆ ಕಡ್ಡಾಯಕ್ಕೆ ಪಾಲಿಕೆ ಆಯುಕ್ತರು ಒತ್ತು ನೀಡಿದ್ದಾರೆ. ಅಲ್ಲದೆ ಎಲ್ಲ ಹಂತದಲ್ಲಿ ಸಂಪೂರ್ಣವಾಗಿ ಕನ್ನಡ ಅನುಷ್ಠಾನಗೊಳಿಸಿಲು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಿದ್ದು, ಪ್ರತಿಯೊಂದು ನಾಮಫಲಕದಲ್ಲಿಯೂ ಕನ್ನಡ ಪ್ರಧಾನವಾಗಿರಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ಅಂಗಡಿಕಾರರಿಗೆ ನೀಡಿದ್ದಾರೆ.