Select Your Language

Notifications

webdunia
webdunia
webdunia
webdunia

ಬೆಳ್ಳಂಬೆಳಿಗ್ಗೆ ಬಸ್‌ - ಲಾರಿ ಢಿಕ್ಕಿ : 13 ಜನರು ಗಂಭೀರ

ಬೆಳ್ಳಂಬೆಳಿಗ್ಗೆ ಬಸ್‌ - ಲಾರಿ ಢಿಕ್ಕಿ : 13 ಜನರು ಗಂಭೀರ
ಹುಬ್ಬಳ್ಳಿ , ಬುಧವಾರ, 30 ಅಕ್ಟೋಬರ್ 2019 (14:55 IST)
ಕೆಎಸ್‌ಆರ್‌ಟಿಸಿ ಬಸ್‌- ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

13 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಕಲಘಟಗಿ ತಾಲೂಕಿನ ಕಣವಿ ಹೊನ್ನಾಪೂರ ಗ್ರಾಮದ ಬಳಿ ನಡೆದಿದೆ.

ಕಣವಿ ಹೊನ್ನಾಪೂರದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಬಸ್‌ ರಸ್ತೆ ಬದಿ ನಿಂತಿದ್ದ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಬಸ್‌ನ ಮುಂಭಾಗ, ಲಾರಿಯ ಹಿಂಭಾಗ ಜಖಂಗೊಂಡಿದ್ದು, ಬಸ್‌ ಚಾಲಕ, ನಿರ್ವಾಹಕ ಹೊರತುಪಡಿಸಿ ಬಸ್‌ನಲ್ಲಿದ್ದ 13 ಜನರು ಗಾಯಗೊಂಡಿದ್ದಾರೆ. ಈ ಘಟನೆ ಬೆಳಗ್ಗೆ 7 ರ ಸುಮಾರಿಗೆ ನಡೆದಿದ್ದು, ಪ್ರಯಾಣಿಕರಿಗೆ  ಗಾಯಗಳಾಗಿವೆ. ಅವರಿಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಓರ್ವ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದೆ.  

ಈ ಘಟನೆಗೆ ಸಬಂಧಿಸಿದಂತೆ ಬಸ್‌ ಚಾಲಕ ದುಮ್ಮವಾಡದ ಈರಪ್ಪ ತಿರಕಪ್ಪ ಜೀವಣ್ಣವರ ಹಾಗೂ ಲಾರಿಯ ಚಾಲಕ ಕಣವಿ ಹೊನ್ನಾಪೂರದ ಇರ್ಫಾನ್‌ ಮಾಬೂಲಿ ಮಿರ್ಜಿನ್ನವರ ವಿರುದ್ಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ನಲ್ಲಿ ಶಾಸಕರ ಬಂಡಾಯ ಶಮನ ಮಾಡಲು ಹೆಚ್ ಡಿ ಕುಮಾರಸ್ವಾಮಿ ಮೆಗಾ ಪ್ಲ್ಯಾನ್