Select Your Language

Notifications

webdunia
webdunia
webdunia
webdunia

ಬಿಎಸ್‌ವೈಗೆ ಬರೀ ಸುಳ್ಳಿನ ಹಾವು ಬಿಡುವುದೇ ಕಾಯಕ: ಸಚಿವ ಪಾಟೀಲ್

ಬಿಎಸ್‌ವೈಗೆ ಬರೀ ಸುಳ್ಳಿನ ಹಾವು ಬಿಡುವುದೇ ಕಾಯಕ: ಸಚಿವ ಪಾಟೀಲ್
ವಿಜಯಪುರ , ಮಂಗಳವಾರ, 5 ಡಿಸೆಂಬರ್ 2017 (13:56 IST)
ಪ್ರಧಾನಿ ಮೋದಿ ಕಾಲಿಗೆ ಬಿದ್ದು ಮಹಾದಾಯಿ ಸಮಸ್ಯೆ ಬಗೆಹರಿಸ್ತೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏನ್ ಮಾಡ್ತಿದ್ದಾರೆ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಒಂದು ತಿಂಗಳೊಳಗೆ ಪ್ರಧಾನಿ ಮೋದಿ ಕಾಲಿಗೆ ಬಿದ್ದಾದರೂ ಮಹಾದಾಯಿ ಸಮಸ್ಯೆ ಈಡೇರಿಸುತ್ತೇನೆ ಎಂದಿದ್ದ ಯಡಿಯೂರಪ್ಪ ಏನ್ ಮಾಡ್ತಿದ್ದಾರೆ? ಒಂದು ತಿಂಗಳು ಮುಗಿತಲ್ಲ ಎಂದು ಪ್ರಶ್ನಿಸಿದ್ದಾರೆ.
 
ಯಡಿಯೂರಪ್ಪಗೆ ಸುಳ್ಳು ಹೇಳುವುದು ಚಟವಾಗಿದೆ. ಬರೀ ಸುಳ್ಳಿನ ಹಾವು ಬಿಡುವುದೇ ಕೆಲಸವಾಗಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ಸುಳ್ಳಿನ ಹಾವು ಬಿಡುತ್ತಿದ್ದರೆ, ರಾಜ್ಯದಲ್ಲಿ ಯಡಿಯೂರಪ್ಪ ಸುಳ್ಳಿನ ಹಾವು ಬಿಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
 
ನನ್ನ ಬಳಿ ದಾಖಲೆಗಳಿವೆ ಇಂದು ಬಿಡುಗಡೆ ಮಾಡ್ತೇನೆ, ನಾಳೆ ಬಿಡುಗಡೆ ಮಾಡ್ತೇನೆ ಎಂದು ಹೇಳುತ್ತಾ ಜನರನ್ನು ವಂಚಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಇವರ ಬಳಿ ದಾಖಲೆಗಳು ಇಲ್ಲ ಏನೂ ಇಲ್ಲ ಎಂದು ಲೇವಡಿ ಮಾಡಿದರು.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ: ಪತಿಗೆ ಪತ್ನಿ ಮಾಡಿದ್ದು ನೋಡಿದ್ರೆ ಬೆಚ್ಚಿ ಬೀಳುವುದು ಖಚಿತ