Select Your Language

Notifications

webdunia
webdunia
webdunia
webdunia

‘ಹರಿಹರ ಬ್ರಹ್ಮಾದಿಗಳು ಬಂದ್ರೂ ನನ್ನ ಗೆಲುವು ಖಚಿತ’

‘ಹರಿಹರ ಬ್ರಹ್ಮಾದಿಗಳು ಬಂದ್ರೂ ನನ್ನ ಗೆಲುವು ಖಚಿತ’
ವಿಜಯಪುರ , ಮಂಗಳವಾರ, 5 ಡಿಸೆಂಬರ್ 2017 (11:20 IST)
ವಿಜಯಪುರ: ನನ್ನ ವಿರುದ್ಧ ಯಾರು ಏನೇ ಮಾಡಿದರೂ, ತಲೆ ಕೆಳಗೆ ಮಾಡಿ ನಿಂತರೂ ಈ ಬಾರಿ ಚುನಾವಣೆಯಲ್ಲಿ ನನ್ನ ಗೆಲುವು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
 

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹರಿ ಹರ ಬ್ರಹ್ಮಾದಿಗಳು ಬಂದರೂ ನನ್ನ ಗೆಲುವು ತಡೆಯಲು ಸಾಧ್ಯವಿಲ್ಲ. ನಾನು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ನೋಡುತ್ತಿರಿ ಎಂದು ಸವಾಲು ಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಪಾಟೀಲ್, ಯಡಿಯೂರಪ್ಪ ನನ್ನ ವಿರುದ್ಧ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಆದರೆ ಅವರು ಬಿಡುಗಡೆ ಮಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ನಾನಂತೂ ಯಡಿಯೂರಪ್ಪ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನಿಲ್ಲದ ತಮಿಳುನಾಡಿಗೆ ಒಂದು ವರ್ಷ!