Select Your Language

Notifications

webdunia
webdunia
webdunia
webdunia

‘ಬಿ.ಎಸ್.ಯಡಿಯೂರಪ್ಪ ಹೆಣ್ಣು ಹುಲಿ : ರಾಜಾ ಹುಲಿ ಅಲ್ಲ'

‘ಬಿ.ಎಸ್.ಯಡಿಯೂರಪ್ಪ ಹೆಣ್ಣು ಹುಲಿ : ರಾಜಾ ಹುಲಿ ಅಲ್ಲ'
ಯಾದಗಿರಿ , ಭಾನುವಾರ, 8 ಸೆಪ್ಟಂಬರ್ 2019 (19:58 IST)
ಸಿಎಂ ರಾಜಾಹುಲಿ ಯಲ್ಲ ಹೆಣ್ಣು ಹುಲಿ ಅಂತಾ ಶಾಸಕರೊಬ್ಬರು ವ್ಯಂಗ್ಯವಾಡಿದ್ದಾರೆ.
ಯಾದಗಿರಿ ಜಿಲ್ಲೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ, ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಅನುದಾನವನ್ನ ಕಡಿತಗೊಳಿಸಿರೋ ಬಿಜೆಪಿ ಸರ್ಕಾರದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ರು. ಹೈದ್ರಾಬಾದ್ ಕರ್ನಾಟಕ ಮಂಡಳಿಯನ್ನ ಕಲ್ಯಾಣ ಕರ್ನಾಟಕ ಅಂತಾ ಹೆಸರು ಬದಲಿಸಿರೋದು ಸ್ವಾಗತಾರ್ಹ.

ಆದ್ರೆ ಪ್ರದೇಶಾಭಿವೃದ್ಧಿಗೆ ಮೀಸಲಿದ್ದ 4 ಕೋಟಿ ರೂಪಾಯಿ ಕಡಿತಗೊಳಿಸಲಾಗಿದೆ. ಅಲ್ದೆ, ಗುರುಮಠಕಲ್ ಕ್ಷೇತ್ರಕ್ಕೆ ಮೀಸಲಿದ್ದ 3.5 ಕೋಟಿ ರೂಪಾಯಿ ಪಂಚಾಯತ್ ರಾಜ್ ಅನುದಾನವನ್ನೂ ಕಡಿತಗೊಳಿಸಲಾಗಿದೆ ಅಂತಾ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ರು.

ಇನ್ನು ನೆರೆ ಸಂತ್ರಸ್ತರ ಸಹಾಯಕ್ಕೆ ಧಾವಿಸದ ಸರ್ಕಾರ, ಪ್ರದೇಶಾಭಿವೃದ್ಧಿ ನಿಧಿ ಮೇಲೆ ಕಣ್ಣಿಟ್ಟಿರೋದು ವಿಪರ್ಯಾಸ. ಸರ್ಕಾರ ನಮ್ಮ ಹಕ್ಕನ್ನ ನಮಗೆ ನೀಡ್ಬೇಕು. ಇಲ್ಲದಿದ್ದರೆ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

‘ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ವಿಕೃತ ಮನಸ್ಸಿನ ವ್ಯಕ್ತಿ’