ಮೈತ್ರಿ ಸರಕಾರ ವರ್ಗಾವಣೆ ದಂಧಗೆ ಸೀಮಿತ ಎಂದ ಬಿಎಸ್ ವೈ

Webdunia
ಭಾನುವಾರ, 16 ಸೆಪ್ಟಂಬರ್ 2018 (17:41 IST)
ಮೈತ್ರಿ ಸರ್ಕಾರ ಕೇವಲ ವರ್ಗಾವಣೆ ದಂಧೆಗೆ ಸೀಮಿತವಾಗಿದ್ದು ಜನರ, ರೈತರ ಹಿತ  ಮರೆತಿದೆ ಇದು ಅಕ್ಷಮ್ಯ ಅಪರಾಧ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಕೃತ  ಬ್ಯಾಂಕ್ ಸಾಲ ಮನ್ನಾ ಮಾಡುತ್ತೇವೆ ಎಂದು‌ ಬೊಬ್ಬೆ ಹೊಡೆದರು. ನಾಲ್ಕು ವರ್ಷದಲ್ಲಿ ನಾಲ್ಕು ಕಂತುಗಳಲ್ಲಿ ಸಾಲ ತಿರಿಸುತ್ತೇವೆ ಅಂದ್ರೆ ಯಾರು ಕಾಯ್ತಾರೆ? ಹಣ ತುಂಬದೆ ಸಹಕಾರಿ ಕ್ಷೇತ್ರವು ದಿವಾಳಿ ಸ್ಥಿತಿಗೆ ಬಂದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ  ದೊಂಬರಾಟ ಮಾಡಿಕೊಂಡು ಸುಳ್ಳು ಭರವಸೆ ನೀಡಿಕೊಂಡು ಒಡಾಡುತ್ತಿದ್ದಾರೆ ಎಂದರು.

ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನ ಭಿನ್ನಾಬಿಪ್ರಾಯಗಳನ್ನ ಬಗೆಹರಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ ಎಂದರು.
ಜಾರಕಿಹೋಳಿ ಸಹೋದರರು ಬಿಜೆಪಿಗೆ ಸೇರುವ ವಿಚಾರ ಕುರಿತು ಪ್ರತಿಕ್ರಿಯಿಸಿದ್ದು, ನಾನು ಸಷ್ಪಪಡಿಸುತ್ತೇನೆ ಆ ವಿಚಾರದ ಬಗ್ಗೆ ನಾನು ಏನೂ ಮಾತನಾಡಿಲ್ಲ. ಕಾಂಗ್ರೆಸ್ ನ ಒಳಜಗಳಕ್ಕೂ ಬಿಜೆಪಿಗೂ ಸಂಭಂದವಿಲ್ಲ. ಯಾರು ಹೊಗ್ತಾರೋ ಬರ್ತಾರೋ ಅದು ಕಾಂಗ್ರೆಸ್,  ಜೆಡಿಎಸ್ ಮುಖಂಡರಿಗೆ  ಸಂಬಂಧಪಟ್ಟಿದ್ದು, ಬಿಜೆಪಿ‌ಗೆ ಸಂಬಂಧವಿಲ್ಲ. ಬಿಜೆಪಿ 104 ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಜನರ ಆಶೀರ್ವಾದ ಇದೆ. ಪ್ರತಿಪಕ್ಷವಾಗಿ ಕೆಲಸ ಮಾಡ್ತೇವೆ ಎಂದರು.

ರಿಯಲ್ ಎಸ್ಟೇಟ್ ಬಡ್ಡಿಕೋರರ ಬಳಕೆ ವಿಚಾರವಾಗಿ ಸಿಎಂ ಬೇಜಾವಾಬ್ದಾರಿ ಆರೋಪ ಮಾಡ್ತಿದ್ದಾರೆ. ಆ ರೀತಿ  ಮಾಹಿತಿ ಇದ್ದರೆ ಅವರನ್ನ ಬಂಧಿಸಿ ದಂಧೆ ನಡೆಯೋದು ತಡೆಯಬೇಕು. ಇಸ್ಪೇಟ್ , ಜೂಜು ಕೋರರ ತಡೆಯಲು ಇವರು ಏನ್ ಮಾಡ್ತಿದ್ದಾರೆ. ಅದಕ್ಕೂ ನಮಗೂ ಏನ್ ಸಂಬಂಧ ಇದೆ? ಅದನ್ನ ತಡೆಯಲು ಮುಂದಾಗಬೇಕು ಹೊರತು  ಬಿಜೆಪಿ ಮೇಲೆ ಆರೋಪ ಮಾಡಬಾರದು. ವಿನಾಕಾರಣ ಇಂತಹ ಆರೋಪ ಸರಿಯಲ್ಲ ಎಂದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹರಿಯಾಣ ರಾಜ್ಯದಲ್ಲಿ ಒಂದೇ ದಿನದಲ್ಲಿ 257 ಆರೋಪಿಗಳ ಬಂಧನ

100 ವರ್ಷಗಳ ಬಳಿಕ ಆರ್‌ಎಸ್‌ಎಸ್ ಕಾನೂನು ಪಾಲಿಸಿದೆ: ಪ್ರಿಯಾಂಕ್ ಖರ್ಗೆ

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನ

ಇನ್ನೇನು ಮದುವೆಗೆ ಒಂದು ಗಂಟೆಯಿರುವಾಗ ವಧುವನ್ನೇ ಕೊಂದ ವರ, ಕಾರಣ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments