ಬಡವರ ಕನಸಿನ ಮನೆ ಜಾಗದಲ್ಲಿ ತಲೆ ಎತ್ತಲಿದೆ ತಾಲೂಕು ಕಚೇರಿ..!

Webdunia
ಭಾನುವಾರ, 16 ಸೆಪ್ಟಂಬರ್ 2018 (15:46 IST)
ಒಂದು  ಕೈಯಿಂದ ಕೊಟ್ಟು ಮತ್ತೊಂದು ಕೈ ಯಿಂದ ಕಸಿದು ಕೊಳ್ತಿದ್ದಾರೆ ಬಡವರ ಪಾಲಿನ ಮಹತ್ವಕಾಂಕ್ಷಿ ಯೋಜನೆ. ನೆತ್ತಿ ಮೇಲಿನ ಸೂರಿಗಾಗಿ ಸರ್ಕಾರ ಕೊಟ್ಟ ಜಾಗದಲ್ಲಿ ಈಗ ತಾಲೂಕು ಕಚೇರಿ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ನೊಂದ ಕುಟುಂಬಗಳು ಒಂದು ವಾರದಿಂದ ಪ್ರತಿಭಟನೆ ಮಾಡುತ್ತಿದ್ದಾರೆ.  

ಬೀದರ್ ಜಿಲ್ಲೆಯ ನೂತನ ತಾಲೂಕು ಕಮಲನಗರ ಗ್ರಾಮದಲ್ಲಿ 2001 ರಲ್ಲಿ 110 ಬಡ ಕುಟುಂವಗಳಿಗೆ ಆಶ್ರಯ ಯೋಜನೆ ಅಡಿಯಲ್ಲಿ 30 * 35 ಅಡಿಯ ಒಂದೊಂದು ಸೈಟ್ ಕೊಟ್ಟಿದೆ. ಅದಕ್ಕಾಗಿ ಪ್ರಮಾಣ ಪತ್ರ ಕೂಡ ನೀಡಿದೆ. ಆದ್ರೆ ಸರ್ಕಾರ ಘೋಷಣೆ ಮಾಡಿದ ವಸತಿ ಉದ್ದೇಶದ ಜಾಗದಲ್ಲಿ ಈಗ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ.

ಕಳೆದ ವಾರ ಜಿಲ್ಲಾಧಿಕಾರಿ ಎಚ್.ಆರ್ ಮಹದೇವ್ ನೇತೃತ್ವದಲ್ಲಿ ಅಧಿಕಾರಿಗಳ ಸ್ಥಳ ಪರಿಶಿಲನೆ ಮಾಡಿ, ಆಶ್ರಯ ಯೋಜನೆ ಮನೆಗಳ ಫಲಾನುಭವಿಗಳಿಗೆ ಘೋಷಣೆ ಮಾಡಿದ ಭೂಮಿಯನ್ನೆ ತಾಲೂಕು ಕಚೇರಿ ನಿರ್ಮಾಣಕ್ಕೆ ಗುರುತಿಸಿರುವುದರಿಂದ ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ.

ಒಂದು ವಾರದಿಂದ ತಮ್ಮ ಜಮಿನಿನಲ್ಲಿ ಕುಳಿತು ಪ್ರತಿಭಟನೆ ಮಾಡ್ತಿದ್ದಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಬೀದಿಗೆ ಬಂದು ಹೋರಾಟ ಮಾಡ್ತಿದ್ದಾರೆ. ಆದ್ರೆ ಇವರ ಧರಣಿ ಊರ ಬಿಟ್ಟು ದೂರ ಇರುವುದರಿಂದ ಯಾರೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಈವರೆಗೆ ಭೇಟಿ ನೀಡಿಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಂದೆಗೆ ಹೊಡೆಯುತ್ತಿದ್ದ ಕಳ್ಳನ ಮನಸ್ಸು ಒಂದೇ ಕ್ಷಣದಲ್ಲಿ ಬದಲಾಯಿಸಿ ಮಗಳು: ಮನಕಲಕುವ ವಿಡಿಯೋ

ರಸ್ತೆ ಗುಡಿಸುವ ಯಂತ್ರ ಖರೀದಿಸಿ 613 ಕೋಟಿ ರೂ ಗುಳುಂ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬಂಪರ್ ಬೆಲೆ

ಹೈ ಫೈ ಇಂಗ್ಲಿಷ್, ದೊಡ್ಡ ದೊಡ್ಡ ಮಾತು: ದೆಹಲಿ ಬ್ಲಾಸ್ಟ್ ಉಗ್ರ ಉಮರ್ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments