Select Your Language

Notifications

webdunia
webdunia
webdunia
webdunia

ಇಂಗ್ಲಿಷ್ ಪದ್ಯ ಹೇಳದ ಬಾಲಕನಿಗೆ ಶಿಕ್ಷಕಿಯಿಂದ ಬೆತ್ತದಿಂದ ಹೊಡೆತ

ಇಂಗ್ಲಿಷ್ ಪದ್ಯ ಹೇಳದ ಬಾಲಕನಿಗೆ ಶಿಕ್ಷಕಿಯಿಂದ ಬೆತ್ತದಿಂದ ಹೊಡೆತ
ತುಮಕೂರು , ಶುಕ್ರವಾರ, 16 ನವೆಂಬರ್ 2018 (14:42 IST)
ಇಂಗ್ಲಿಷ್ ಪದ್ಯ ಹೇಳದ ಬಾಲಕನಿಗೆ ಬೆತ್ತದಿಂದ ಹೊಡೆದ ಘಟನೆ ನಡೆದಿದೆ. ಒಂದನೇ ತರಗತಿ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕಿ ಲಲಿತ ಮಗುವಿಗೆ ಥಳಿಸಿದ್ದಾಳೆ. ನಂದೀಶ್, ಗೂಸಾ ತಿಂದ ಬಾಲಕನಾಗಿದ್ದಾನೆ.

ಬೆತ್ತದಿಂದ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ ಇಂಗ್ಲಿಷ್ ಪದ್ಯ  ಹೇಳಲಿಲ್ಲ ಎಂದು ನಂದೀಶ್ ಹೊಡೆದಿದ್ದಾಳೆ.
ಶಾಲೆಯಿಂದ ಮನೆಗೆ ವಾಪಸ್ ಬಂದಾಗ ಪೋಷಕರಿಗೆ ವಿಷಯವನ್ನು ಬಾಲಕ ತಿಳಿಸಿದ್ದಾನೆ.

ಶಿಕ್ಷಕಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ  ನಡೆಸಿದರು. ಶಿಕ್ಷಕಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಾಲಕನಿಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  



 

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ಕಲಾವಿದೆಗೆ ಮೀ ಟೂ ಅನುಭವ