Select Your Language

Notifications

webdunia
webdunia
webdunia
webdunia

ಬಸ್ ಆರಂಭವಾದರೂ ಪ್ರಯಾಣಿಕರ ಪರದಾಟ ತಪ್ಪಿಲ್ಲ

ಬಸ್ ಆರಂಭವಾದರೂ ಪ್ರಯಾಣಿಕರ ಪರದಾಟ ತಪ್ಪಿಲ್ಲ
ಬೆಂಗಳೂರು , ಸೋಮವಾರ, 21 ಜೂನ್ 2021 (09:06 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾದ ಖುಷಿ ಒಂದೆಡೆಯಾದರೆ, ಪ್ರಯಾಣಿಕರಿಗೆ ಪರದಾಟ ಮಾತ್ರ ತಪ್ಪಿಲ್ಲ.


ಬಿಎಂಟಿಸಿ ಬಸ್ ಆರಂಭವಾದ ಮೊದಲ ದಿನವೇ ಪ್ರಯಾಣಿಕರ ನೂಕು ನುಗ್ಗಲು ಕಂಡುಬಂದಿದೆ. ಈ ನಡುವೆ ಸರ್ಕಾರದ ಆದೇಶದಂತೆ ಬಸ್ ಗಳಲ್ಲಿ ಕೇವಲ ಶೇ.50 ಪ್ರಯಾಣಿಕರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ. ಹೀಗಾಗಿ ಪ್ರಯಾಣಿಕರು ಬಸ್ ಗಾಗಿ ಕಾಯುವಂತಾಗಿದೆ.

ಸಾಕಷ್ಟು ಬಸ್ ಗಳಿಲ್ಲದ ಕಾರಣ ಪ್ರಯಾಣಿಕರು ಬಸ್ ಸಿಗದೇ ಪರದಾಡುವಂತಾಗಿದೆ. ಇನ್ನು ಬಸ್ ಸಂಖ್ಯೆಗಳೂ ಕಡಿಮೆಯಿರುವುದರಿಂದ ಪ್ರಯಾಣಿಕರು ಕೆಎಸ್ ಆರ್ ಟಿಸಿ,  ಬಿಎಂಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬಸ್ ಆರಂಭವಾದರೂ ಪ್ರಯಾಣಿಕರ ಬವಣೆ ತಪ್ಪಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾದಿಂದ ಹೋದ ಮಾನ ಹಿಂಪಡೆಯಲು ಸಿಎಂ ಬಿಎಸ್ ವೈ-ಜೆಪಿ ನಡ್ಡಾ ಸಭೆ