Select Your Language

Notifications

webdunia
webdunia
webdunia
webdunia

ಅನ್ ಲಾಕ್ 2.0 ಗೆ ಸಿದ್ಧತೆ: ಇಂದು ಮಹತ್ವದ ಮೀಟಿಂಗ್

ಅನ್ ಲಾಕ್ 2.0 ಗೆ ಸಿದ್ಧತೆ: ಇಂದು ಮಹತ್ವದ ಮೀಟಿಂಗ್
ಬೆಂಗಳೂರು , ಶನಿವಾರ, 19 ಜೂನ್ 2021 (11:03 IST)
ಬೆಂಗಳೂರು: ಕೊರೋನಾ ಪ್ರಕರಣಗಳು ಕಡಿಮೆಯಾದ ಹಿನ್ನಲೆಯಲ್ಲಿ ಸೋಮವಾರದಿಂದ ಅನ್ ಲಾಕ್ 2.0 ಗೆ ಸರ್ಕಾರ ಸಿದ್ಧತೆ ನಡೆಸಿದೆ.


ಸೋಮವಾರದಿಂದ ಮತ್ತಷ್ಟು ವಿನಾಯ್ತಿ ಸಿಗಲಿದ್ದು, ಹೊಸ ನಿಯಮಾವಳಿಗಳನ್ನು ರೂಪಿಸಲು ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದೇ ಹೊಸ ಗೈಡ್ ಲೈನ್ಸ್ ಬಹಿರಂಗವಾಗಲಿದೆ.

ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿರುವ 11 ಜಿಲ್ಲೆಗಳಲ್ಲೂ ಅನ್ ಲಾಕ್ ಆಗುವ ಸಾಧ್ಯತೆಯಿದೆ. ಒಟ್ಟಾರೆ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ. 5 ಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ಬಸ್ ಸಂಚಾರ, ಅಂಗಡಿಮುಂಗಟ್ಟುಗಳನ್ನು ತೆರೆಯಲು ಸಂಪೂರ್ಣವಾಗಿ ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ ನೈಟ್ ಕರ್ಫ್ಯೂ ಮುಂದುವರಿಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಕ್ಯಾಬಿನೆಟ್ ಸೇರಿಕೊಳ್ಳಲಿದ್ದಾರೆ ಗಾಂಧಿ, ಸಿಂಧಿಯಾ