Publish Date: Fri, 23 Jan 2026 (12:19 IST)
Updated Date: Fri, 23 Jan 2026 (12:23 IST)
ಬೆಂಗಳೂರು: ಈ ವಾರಂತ್ಯಕ್ಕೆ ಮೂರು ದಿನ ರಜೆಯಿರುವುದರಿಂದ ಬೆಂಗಳೂರಿನಿಂದ ಸಾಕಷ್ಟು ಜನ ಊರುಗಳತ್ತ ಮನೆ ಮಾಡಿದ್ದಾರೆ. ಊರಿಗೆ ಹೋಗಲು ಸಂಜೆ ಬಸ್ ಸಿಕ್ತಿಲ್ಲ ಎಂದು ಪರದಾಡುವವರಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ.
ಸಂಜೆಯಾದರೆ ಸಾಕು ಬಿಎಂಟಿಸಿ ಬಸ್ ಬೇಕಾದಷ್ಟು ಇರಲ್ಲ, ನಿಗದಿತ ಸಮಯಕ್ಕೆ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ಗೆ ತಲುಪಲು ಸಾಧ್ಯವಾಗಲ್ಲ ಎಂಬ ಕಂಪ್ಲೇಂಟ್ ಜನರಲ್ಲಿ ಇರುತ್ತದೆ. ವಾರಂತ್ಯಕ್ಕೆ ಸಾಕಷ್ಟು ಜನ ಊರಿಗೆ ಹೋಗುವುದರಿಂದ ಈ ಸಮಸ್ಯೆಯಾಗುತ್ತದೆ. ಅಲ್ಲದೆ ಕೆಎಸ್ ಆರ್ ಟಿಸಿ ಬಸ್ ಗಳಲ್ಲೂ ಸೀಟ್ ಇಲ್ಲ ಎಂಬ ಸಮಸ್ಯೆಯಿದೆ.
ಈ ಬಾರಿ ಸೋಮವಾರವೂ ರಜೆಯಿರುವುದರಿಂದ ಸಾಕಷ್ಟು ಜನ ಊರುಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಕೆಎಸ್ ಆರ್ ಟಿಸಿ ಬಸ್ ಗಳು, ಖಾಸಗಿ ಬಸ್ ಗಳ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಇದರ ನಡುವೆ ಕೆಎಸ್ ಆರ್ ಟಿಸಿ ಬಸ್ ಗಳಿಗೆ ಕನೆಕ್ಟ್ ಮಾಡುವ ಬಿಎಂಟಿಸಿ ಬಸ್ ಗಳಲ್ಲೂ ನಾಳೆ ರಶ್ ಕಂಡುಬರಲಿದೆ.
ಹೀಗಾಗಿಯೇ ನಾಳೆ ಬಿಎಂಟಿಸಿ ಹೆಚ್ಚುವರಿ ಬಸ್ ಬಿಡಲು ತೀರ್ಮಾನಿಸಿದೆ. ನಾಳೆ ಹೆಚ್ಚುವರಿಯಾಗಿ 500 ಬಸ್ ಬಿಡಲಿದೆ. ಜೊತೆಗೆ ಬೆಂಗಳೂರಿನ ಕೆಲವು ಸುತ್ತಮುತ್ತಲ ಜಿಲ್ಲೆಗಳಿಗೂ ಬಿಎಂಟಿಸಿ ಬಸ್ ಗಳನ್ನು ಬಳಕೆ ಮಾಡಲು ತೀರ್ಮಾನಿಸಲಾಗಿದೆ.