Select Your Language

Notifications

webdunia
webdunia
webdunia
webdunia

ಸಚಿವ ಸ್ಥಾನ ಬೇಕೇ ಬೇಕು ಎಂದ ಬಿಜೆಪಿ ಶಾಸಕ : ಸಿಎಂಗೆ ಹೊಸ ಟೆನ್ಶನ್

ಸಚಿವ ಸ್ಥಾನ ಬೇಕೇ ಬೇಕು ಎಂದ ಬಿಜೆಪಿ ಶಾಸಕ : ಸಿಎಂಗೆ ಹೊಸ ಟೆನ್ಶನ್
ಬೆಂಗಳೂರು , ಮಂಗಳವಾರ, 4 ಫೆಬ್ರವರಿ 2020 (20:56 IST)

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಮುಂದಾಗ್ತಿರೋವಂತೆ ಹೊಸ ಟೆನ್ಶನ್ ಗಳು ಬರಲಾರಂಭಿಸಿವೆ.
 

ಸಚಿವ ಸ್ಥಾನ ಬೇಕೇ ಬೇಕು. ಮಂತ್ರಿಗಿರಿ ಕೇಳೋದು ನನ್ನ ಹಕ್ಕು. ಹೀಗಂತ ಸವದತ್ತಿ ಎಲ್ಲಮ್ಮ ಮತಕ್ಷೇತ್ರದ ಶಾಸಕ ಆನಂದ ಮಾಮನಿ ಪಟ್ಟು ಹಿಡಿದಿದ್ದಾರೆ.

ಬೆಳಗಾವಿ ಗ್ರಾಮೀಣ ಭಾಗಕ್ಕೆ ಆದ್ಯತೆ ಕೊಡಬೇಕು. ಹೀಗಾಗಿ ನನಗೆ ಮಂತ್ರಿಗಿರಿ ಪಟ್ಟ ಕೊಡಲೇಬೇಕು ಅಂತ ಆಗ್ರಹ ಮಾಡಿದ್ದಾರೆ.

ಸಚಿವ ಸ್ಥಾನ ನೀಡಬೇಕು ಅಂತ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಪಕ್ಷಕ್ಕಾಗಿ ದುಡಿದಿರೋ ನನಗೆ ನ್ಯಾಯ ಕೊಡಬೇಕೆಂದಿದ್ದಾರೆ. ಈ ಮೂಲಕ ಸಿಎಂ ಮೇಲೆ ಪರೋಕ್ಷ ಒತ್ತಡ ತಂತ್ರಕ್ಕೆ ಮೊರೆ ಹೋಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅದರ ಆಸೆ ತೋರಿಸಿ ಯುವತಿ ಮೇಲೆ ಪ್ರತಿದಿನ ಅತ್ಯಾಚಾರ