Publish Date: Sun, 02 Feb 2020 (19:26 IST)
Updated Date: Sun, 02 Feb 2020 (19:31 IST)
ಮಂತ್ರಿಗಿರಿ ಬಿಕ್ಕಟ್ಟು ಮುಂದುವರಿದಿರುವಂತೆ ಬೈ ಎಲೆಕ್ಷನ್ ನಲ್ಲಿ ಗೆದ್ದು ಶಾಸಕರಾದವರು ಸಿಎಂಗೆ ಪರೋಕ್ಷ ಎಚ್ಚರಿಕೆ ನೀಡ್ತಿದ್ದಾರೆ.
ಚುನಾವಣೆಯಲ್ಲಿ ಗೆದ್ದವರಿಗೆಲ್ಲ ಸಚಿವ ಸ್ಥಾನ ಕೊಡ್ತೀವಿ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಗೆದ್ದ ಶಾಸಕರಲ್ಲಿ ಯಾರೊಬ್ಬರದು ಕೈ ಬಿಡಬಾರದು. ಒಂದು ವೇಳೆ ಹಾಗಾದರೆ ಸಿಎಂಗೆ ವಚನ ಭ್ರಷ್ಟತೆಯ ಹಣೆಪಟ್ಟಿ ಬರುತ್ತೆ.
ಹೀಗಂತ ಶಾಸಕ ಶ್ರೀಮಂತ ಪಾಟೀಲ್ ಹೇಳೋ ಮೂಲಕ, ಸಿಎಂ ಹಾಗೂ ಹೈಕಮಾಂಡ್ ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಮಾತು ಕೊಟ್ಟಂತೆ 11 ಜನರಿಗೂ ಸಚಿವ ಸ್ಥಾನವನ್ನು ಸಿಎಂ ಕೊಡಬೇಕು ಅಂತ ಹೇಳಿದ್ದಾರೆ.