Publish Date: Wed, 03 Nov 2021 (16:01 IST)
Updated Date: Wed, 03 Nov 2021 (16:03 IST)
ಬಿಜೆಪಿ ಸೋಲು ಹಿನ್ನಲೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಶ್ರೀನಿವಾಸ್ ಮಾನೆಯನ್ನ ಹಾಡಿ ಹೊಗಳಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ ನಿಜ, ಆದ್ರೆ ಅದು ಶ್ರೀನಿವಾಸ್ ಮಾನೆ ಗೆಲುವು ಅಂತ ಹಾಡಿ ಹೊಗಳಿದ್ದಾರೆ. ಇನ್ನು ಕ್ಷೇತ್ರದ ಗೆಲುವಿಗಾಗಿ ಶ್ರೀನಿವಾಸ್ ಮಾನೆ ಸಾಕಷ್ಟು ಪ್ರಯತ್ನ ಹಾಕಿದ್ದರು, ಅದರ ಫಲ ರಿಸಲ್ಟ್ನಲ್ಲಿ ಗೊತ್ತಾಗಿದೆ. ಹೀಗಾಗಿ ನಾನು ಆ ಗೆಲುವಿನ ಕ್ರೆಡಿಟ್ ಆತನಿಗೆ ನೀಡುತ್ತೇನೆ ಅಂತ ಹೇಳಿದ್ದಾರೆ.. ಅಲ್ಲದೇ, ಚುನಾವಣೆಯಲ್ಲಿ ಜನರು ಏನು ತೀರ್ಮಾನ ಕೊಡ್ತಾರೋ ಅದಕ್ಕೆ ತಲೆ ತಗ್ಗಿಸಬೇಕು ಅಂತ ಈಶ್ವರಪ್ಪ ಹೇಳಿದ್ದಾರೆ..