Select Your Language

Notifications

webdunia
webdunia
webdunia
webdunia

ಶ್ರದ್ಧಾ ಮರ್ಡರ್ ಕೇಸ್ ​ಗೆ ಬಿಗ್​​​ ಟ್ವಿಸ್ಟ್..!

ಶ್ರದ್ಧಾ ಮರ್ಡರ್ ಕೇಸ್ ​ಗೆ ಬಿಗ್​​​ ಟ್ವಿಸ್ಟ್..!
ದೆಹಲಿ , ಬುಧವಾರ, 16 ನವೆಂಬರ್ 2022 (17:59 IST)
ದೇಶಾದ್ಯಂತ ಸೆನ್ಸೇಷನ್​​​ ಸೃಷ್ಠಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ಭೀಕರ ಮರ್ಡರ್ ಕೇಸ್​ಗೆ ಬಿಗ್​​​ ಟ್ವಿಸ್ಟ್​​​​ ಸಿಕ್ಕಿದೆ. 6 ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣ ಇದೀಗ ಬಯಲಿಗೆ ಬಂದಿದ್ದು, ಆ ಕೊಲೆಯನ್ನು ಮಾಡಿರುವ ರೀತಿ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ. ಅಫ್ತಾಬ್ ಜೊತೆ ಲಿವಿಂಗ್ ಟುಗೆದರ್ ರಿಲೇಷನ್​ಷಿಪ್​ನಲ್ಲಿದ್ದ ಶ್ರದ್ಧಾಳನ್ನು 35 ಪೀಸ್​ ಮಾಡಿ ದೇಹದ ತುಂಡುಗಳನ್ನು ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ಇದೀಗ ಈ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮೃತ ಶ್ರದ್ಧಾಳ ಸ್ನೇಹಿತನ ಹೇಳಿಕೆ ಪ್ರಕರಣದ ಗತಿಯನ್ನೇ ಬದಲಿಸಿದೆ. ಅಫ್ತಾಬ್​ನ ಪ್ರೀತಿಯ ನಾಟಕ ಶ್ರದ್ಧಾಗೆ ತಿಳಿದಿತ್ತು. ಆದರೆ ಅವಳು ಅಷ್ಟರಲ್ಲಾಗಲೇ ಸಾವಿನ ಕದ ತಟ್ಟಿದ್ದಳು ಎಂದು ಹೇಳಿರುವ ಸ್ನೇಹಿತ, ತನ್ನ ಬಳಿ ಅವಳು ತನ್ನ ಅಳಲನ್ನು ತೋಡಿಕೊಂಡಿದ್ದಳು ಎಂದು ಹೇಳಿದ್ದಾನೆ. ಶ್ರದ್ಧಾ ನನಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ಲು. ನನ್ನನ್ನು ಈ ನರಕದ ಕೂಪದಿಂದ ಕರೆದುಕೊಂಡು ಹೋಗು. ಇಲ್ಲದಿದ್ರೆ ಅಫ್ತಾಬ್ ನನ್ನನ್ನು ಕೊಲ್ಲುತ್ತಾನೆಂದಿದ್ಲು. ಈ ವೇಳೆ ನಾನು ಅಫ್ತಾಬ್​​​​ಗೆ ಎಚ್ಚರಿಕೆ ನೀಡ್ದೆ. ಇದೇ ರೀತಿಯಲ್ಲಿ ಮುಂದುವರೆದ್ರೆ ನಾನು ಪೊಲೀಸ್ ಕಂಪ್ಲೇಟ್ ಕೊಡುವ ವಾರ್ನಿಂಗ್ ಕೊಟ್ಟೆ. ಆದ್ರೆ ಶ್ರದ್ಧಾ ಹಾಗೂ ಅಫ್ತಾಬ್ ಪರಸ್ಪರ ಅನ್ಯ ಧರ್ಮದವರಾಗಿದ್ದ ಕಾರಣ, ನಾನು ಕೇಸ್ ಕೊಡಲು ಹಿಂದೇಟು ಹಾಕಿದೆ. ಕೇಸ್ ಕೊಟ್ಟರೆ ಇವರ ಪ್ರೀತಿಗೆ ತೊಂದರೆಯಾಗ್ಬೋದು ಎಂದು ಈ ನಿರ್ಧಾರ ತೆಗೆದುಕೊಂಡೆ. ಶ್ರದ್ಧಾ ದಿನಕಳೆದಂತೆ ಅಫ್ತಾಬ್​ನನ್ನು ತೊರೆಯಲು ನಿರ್ಧರಿಸಿದ್ಲು. ಜೂನ್ ತಿಂಗಳಲ್ಲಿ ಶ್ರದ್ಧಾ ಜೊತೆ ಕೊನೆಯದಾಗಿ ಮಾತನಾಡಿದ್ದೆ ಎಂದು ಪೊಲೀಸರ ಬಳಿ ಹೇಳಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಚಿತವಾಗಿ ವರ್ತಿಸುತ್ತಿದ್ದ ವೈದ್ಯ ಅರೆಸ್ಟ್​​​