Select Your Language

Notifications

webdunia
webdunia
webdunia
webdunia

ಡಿ.ಕೆ.ಶಿವಕುಮಾರ್ ದಿಢೀರ್ ದೆಹಲಿ ಭೇಟಿ - ಸಿದ್ದರಾಮಯ್ಯ ಟೀಮ್ ಗೆ ಬಿಗ್ ಶಾಕ್

ಡಿ.ಕೆ.ಶಿವಕುಮಾರ್ ದಿಢೀರ್ ದೆಹಲಿ ಭೇಟಿ - ಸಿದ್ದರಾಮಯ್ಯ ಟೀಮ್ ಗೆ ಬಿಗ್ ಶಾಕ್
ನವದೆಹಲಿ , ಶುಕ್ರವಾರ, 24 ಜನವರಿ 2020 (21:57 IST)
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಬ್ರೇಕಿಂಗ್ ನ್ಯೂಸ್ ಗಳು ಹರಿದಾಡುತ್ತಿರುವಂತೆ ದೆಹಲಿಗೆ ಡಿಕೆಶಿ ಭೇಟಿ ನೀಡಿರೋದು  ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ನವದೆಹಲಿಗೆ ಭೇಟಿ ನೀಡಿದ್ದರ ಕುರಿತು ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್ ನ ಮುಖಂಡ ಹಾಗೂ ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ.ಶಿವಕುಮಾರ್, ಕೋರ್ಟ್ ಕೇಸ್ ಇದ್ದ ಕಾರಣಕ್ಕೆ ಹಾಜರಾಗಲು ಬಂದಿರುವೆ ಅಂತ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಚರ್ಚೆ ಅಥವಾ ಮಾತನಾಡೋದಕ್ಕೆ ಬಂದಿಲ್ಲ ಅಂತ ಸ್ಪಷ್ಟಪಡಿಸಿದ್ರು.

ಯಾವ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕಕ್ಕೆ ವಿಳಂಬ ಆಗುತ್ತಿದೆ ಅನ್ನೋದು ಗೊತ್ತಿಲ್ಲ. ಲೇಟ್ ಆಗ್ತಿರೋದಕ್ಕೆ ಯಾವ ಬೇಸರವೂ ಅಂತ ಡಿಕೆಶಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಖ್ಯಾತ ಸ್ವಾಮೀಜಿಗಳಿಗೆ ಕೊಲೆ ಬೆದರಿಕೆ : ಡೆಡ್ ಲೈನ್ ಫಿಕ್ಸ್ ಮಾಡಿದ ಹಂತಕರು