Select Your Language

Notifications

webdunia
webdunia
webdunia
webdunia

ಬೆಣ್ಣೆತೋರಾ: ಕಾಲುವೆಗಳಿಗೆ ನೀರು ಬಿಡುಗಡೆ

ಬೆಣ್ಣೆತೋರಾ: ಕಾಲುವೆಗಳಿಗೆ ನೀರು ಬಿಡುಗಡೆ
ಕಲಬುರಗಿ , ಶುಕ್ರವಾರ, 14 ಸೆಪ್ಟಂಬರ್ 2018 (19:41 IST)
ಬೆಣ್ಣೆತೋರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಕೋರಿಕೆಯ ಮೇರೆಗೆ ಕಾಲುವೆಗಳಿಗೆ ನೀರು ಹರಿಬಿಡಲಾಗಿದೆ.

ಬೆಣ್ಣೆತೊರಾ ಯೋಜನೆಯ ಬಲದಂಡೆ ಕಾಲುವೆ ಅಡಿಯಲ್ಲಿ ಕಿ.ಮೀ. 50.00ರವರೆಗೆ ಹಾಗೂ ಎಡದಂಡೆ ಕಾಲುವೆ ಅಡಿಯಲ್ಲಿ ಕಿ.ಮೀ. 30.00 ವರೆಗೆ ಕಾಲುವೆಯಲ್ಲಿ ಸೆಪ್ಟೆಂಬರ್ 14 ರಿಂದ 30ರವರೆಗೆ  ನೀರು ಹರಿಬಿಡಲಾಗುವುದು. ಅಚ್ಟುಕಟ್ಟು ಪ್ರದೇಶದ ರೈತರು ಕಾಲುವೆ ನೀರಿನ ಸದುಪಯೋಗ ಪಡೆಯಬೇಕೆಂದು ಅಧಿಕಾರಿಗಳು ಕೋರಿದ್ದಾರೆ.

ಹೆಬ್ಬಾಳ ಬೆಣ್ಣೆತೋರಾ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಣೆ ನೀಡಿದ್ದು, ಕಾಲುವೆಗಳಿಗೆ ಬಿಡುವ ನೀರನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಕೃಷಿ ಚಟುವಟಿಕೆಗಳಿಗೆ ನೀರು ಅಗತ್ಯವಾಗಿರುವುದರಿಂದ ಬೆಣ್ಣೆತೊರಾ ಯೋಜನೆಯ ಬಲದಂಡೆ ಕಾಲುವೆಗೆ ನೀರು ಬಿಡುಗಡೆಮಾಡುವಂತೆ ಅಧಿಕಾರಿಗಳಿಗೆ ಕೋರಿದ್ದರು.

 


Share this Story:

Follow Webdunia kannada

ಮುಂದಿನ ಸುದ್ದಿ

ಸಮ್ಮಿಶ್ರ ಸರಕಾರ ಪತನ ಯಾರಿಂದಲೂ ಸಾಧ್ಯವಿಲ್ಲ ಎಂದ ಹೆಚ್.ಡಿ.ಆರ್