Webdunia - Bharat's app for daily news and videos

Install App

ಬೆಂಕಿಗೆ ಬೆಚ್ಚಿ ಬಿದ್ದ ಬೆಂಗಳೂರು ಅಧಿಕಾರಿಗಳು

Webdunia
ಬುಧವಾರ, 21 ಆಗಸ್ಟ್ 2019 (20:05 IST)
ಬೆಂಕಿಗೆ ಬೆಂಗಳೂರು ಅಧಿಕಾರಿಗಳು ಬೆಚ್ಚಿಬಿದ್ದು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬಿಬಿಎಂಪಿ ಸಭಾಂಗಣದ ಕಚೇರಿಯಲ್ಲಿದ್ದ ಉಪಕರಣಗಳು ಸಂಪೂರ್ಣ ‌ಸುಟ್ಟು‌ ಭಸ್ಮವಾಗಿರುವಂತಹ ಘಟನೆ ಬೆಂಗಳೂರು ‌ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯ ಸಭಾಂಗಣದಲ್ಲಿ ನಡೆದಿದೆ.

ಸಭಾಂಗಣದಲ್ಲಿ‌ ಸತತ ಸಭೆಗಳಿದ್ದ ಕಾರಣ ಸಭೆಯಲ್ಲಿ ಮೈಕ್ ಹಾಗು‌ ಎಸಿ ಬಳಕೆಯನ್ನು ಮುಂಜಾನೆಯಿಂದ ಮಾಡುತ್ತಿದ್ದು ಪದೇ ಪದೇ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸಭಾಂಗಣ ತುಂಬಾ ಬೆಂಕಿ ಆವರಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸಭೆಯಲ್ಲಿದ್ದ ಅಧಿಕಾರಿಗಳು ಹಾಗು‌ ಸಿಬ್ಬಂದಿ ಗಾಬರಿಗೊಂಡು‌ ಸಭಾಂಗಣದಿಂದ ಹೊರಗೆ ಓಡಿ ಹೋದರು.

ನಂತರ ಬಿಬಿಎಂಪಿಯಲ್ಲಿನ ಸಂಪೂರ್ಣ ವಿದ್ಯುತ್ ಕಟ್ ಮಾಡಿ ಹೊತ್ತಿ ಉರಿಯುತ್ತಿದ್ದು ಬೆಂಕಿಯನ್ನು ಆರಿಸುವಂತ ಉಪಕರಣದಿಂದ ಬೆಂಕಿಯನ್ನು ನಂದಿಸಿದ್ದಾರೆ. ಇನ್ನು ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಉಪಕರಣಗಳು ಹಾಗು ದಾಖಲೆಗಳು ಸಂಪೂರ್ಣ ‌ಸುಟ್ಟು ಭಸ್ಮವಾಗಿದೆ ಎಂಬ ಮಾತು‌ ಕೇಳಿ ಬರುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ‌ದಳ ಸಿಬ್ಬಂದಿ ಭೇಟಿ‌ ನೀಡಿ‌ ಪರಿಶೀಲನೆ ‌ನಡೆಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments