Webdunia - Bharat's app for daily news and videos

Install App

ಬರದ ಗಾಯದ ಮೇಲೆ ನೆರೆಯ ಬರೆ, ಬೀದಿಗೆ ಬಿದ್ದ ಸಂತ್ರಸ್ಥರ ಬದುಕು

Webdunia
ಬುಧವಾರ, 21 ಆಗಸ್ಟ್ 2019 (20:01 IST)
ಆ ಗ್ರಾಮಗಳಲ್ಲಿ ಸಂಜೆಯಾದರೆ ಸಾಕು ಕವಿಯುವ ಕತ್ತಲೆ, ರಾತ್ರಿಯಾದರೆ ಸಾಕು ಸೊಳ್ಳೆಗಳ ಕಾಟ, ಉಸಿರಾಡುವ ಗಾಳಿಯೂ ವಿಷಗಾಳಿಯಿಂದ ಕಲುಷಿತ, ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಳವರೆಗೆ ನಿತ್ಯದ ಅಲೆದಾಟ.

ಬೆಳಗಾವಿ ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದಷ್ಟೇ ಆವರಿಸಿದ್ದ ಬರದ ಗಾಯದ ಮೇಲೆ ಉಪ್ಪು ಸುರಿದಂತೆ ಕಳೆದ ಇಪ್ಪತ್ತು ದಿನಗಳಲ್ಲಿ ಪ್ರವಾಹದ ಭೀಕರತೆಯನ್ನು ತಂದ ವರುಣ ಅಕ್ಷರಶಃ ಕೃಷ್ಣಾ ನದಿ ತೀರದ ನೆರೆ ಸಂತ್ರಸ್ಥರನ್ನು ಬೀದಿಗೆ ತಳ್ಳಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸದ್ಯ ತಂಗಡಿ, ಶಿನಾಳ, ಕಾತ್ರಾಳ ಮತ್ತು ಮೋಳೆ ಗ್ರಾಮಗಳ ತೋಟದ ವಸತಿಯ ನೂರಕ್ಕೂ ಹೆಚ್ಚು  ಕುಟುಂಬಗಳು ಬದುಕು ಕಟ್ಟಿಕೊಳ್ಳಲು ಪರದಾಡುತ್ತಿವೆ.

ರಸ್ತೆ ಪಕ್ಕದ ಎರಡು ಬದಿಗಳಲ್ಲಿ ದನಕರುಗಳನ್ನು ಕಟ್ಟಿ, ಮನೆಯ ಮಹಿಳೆಯರು, ಮಕ್ಕಳು, ವಯೋವೃದ್ದರ ಜೊತೆಗೆ ತಗಡಿನ ಶೆಡ್ಡುಗಳನ್ನೆ ಆಸರೆ ಮಾಡಿಕೊಂಡು ಜನರು ಜೀವನ ಸಾಗಿಸುತ್ತಿರುವದು ಮನಸು ಕಲಕುತ್ತದೆ.

ಇನ್ನೊಂದು ಕಡೆ ಚಿಕ್ಕೋಡಿ ತಾಲೂಕಿನ ಯಡೂರ, ಚಂದೂರ, ಅಂಕಲಿ, ಮಾಂಜರಿ ಗ್ರಾಮಗಳಲ್ಲಿ ಮತ್ತು ರಾಯಭಾಗ ತಾಲೂಕಿನ ಹಲವೆಡೆ ಜನರು ತಮ್ಮ ಮನೆಗಳಿಗೆ ತೆರಳುತ್ತಿದ್ದರೆ ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ವಾಪಸ್ ಆದವರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments