Webdunia - Bharat's app for daily news and videos

Install App

ಬೆಂಗಳೂರು ಮಹಿಳೆಯ ದೇಹ 30 ಅಲ್ಲ, 50 ಪೀಸ್: ಮೃತದೇಹ ಜೋಡಿಸುವುದೇ ಸವಾಲು

Krishnaveni K
ಸೋಮವಾರ, 23 ಸೆಪ್ಟಂಬರ್ 2024 (10:23 IST)
Photo Credit: X
ಬೆಂಗಳೂರು: ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಲ್ಕರ್ ಕೇಸ್ ನ್ನೂ ಮೀರಿಸುವಂತೆ ಬೆಂಗಳೂರಿನಲ್ಲಿ ಮಹಿಳೆಯ ಹತ್ಯೆ ಮಾಡಲಾಗಿತ್ತು. ಈಕೆಯ ಹತ್ಯೆ ಬಗ್ಗೆ ಮತ್ತಷ್ಟು ಭಯಾನಕ ಅಂಶಗಳು ಹೊರಗೆ ಬರುತ್ತಿದೆ.

ಬೆಂಗಳೂರಿನ ಮಾಲ್ ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ 29 ವರ್ಷದ ಮಹಾಲಕ್ಷ್ಮಿ ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಿ ಫ್ರಿಡ್ಜ್ ನಲ್ಲಿ ಮೃತದೇಹ ಇರಿಸಲಾಗಿತ್ತು. ಮೊದಲು ಮೃತದೇಹ 30 ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ತುಂಬಲಾಗಿತ್ತು ಎನ್ನಲಾಗಿತ್ತು. ಆದರೆ ಈಗ ಎಲ್ಲಾ ಲೆಕ್ಕ ಹಾಕಿದರೆ 50 ಪೀಸ್ ಆಗಿತ್ತು ಎಂಬ ಮಾಹಿತಿಯಿದೆ.

160 ಲೀ. ಫ್ರಿಡ್ಜ್ ನ ಮೊದಲ ರಾಕ್ ನಲ್ಲಿ ಮಹಾಲಕ್ಷ್ಮಿ ಕಾಲು, ತೊಡೆ, ಹೊಟ್ಟೆ ಇತ್ತು. ಎರಡನೇ ರಾಕ್ ನಲ್ಲಿ ಆಕೆಯ ಕೈ, ಎದೆ ಮತ್ತು ಇತರೆ ಮಾಂಸ, ಮೂರನೇ ರಾಕ್ ನಲ್ಲಿ ತಲೆ ಹಾಗೂ ದೇಹದ ಒಳಭಾಗಗಳನ್ನಿರಿಸಲಾಗಿತ್ತು. ಫ್ರಿಡ್ಜ್ ಪಕ್ಕದಲ್ಲೇ ಒಂದು ಸೂಟ್ ಕೇಸ್ ಪತ್ತೆಯಾಗಿದ್ದು, ಬಹುಶಃ ಅದರಲ್ಲಿ ಶವ ಸಾಗಿಸಲು ಆತ ಮೊದಲು ಯೋಜನೆ ರೂಪಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಫ್ರಿಡ್ಜ್ ನಲ್ಲಿರಿಸಬಹುದು ಎನ್ನಲಾಗಿದೆ.

ಆಕೆಯ ಮೃತದೇಹ ಯಾವ ಮಟ್ಟಿಗೆ ತಲುಪಿತ್ತೆಂದರೆ ಅದನ್ನು ಮತ್ತೆ ಒಟ್ಟುಗೂಡಿಸುವುದೇ ವೈದ್ಯರಿಗೆ ಸವಾಲಾಗಿತ್ತು. ಯಾಕೆಂದರೆ ಕೊಲೆ ಮಾಡಿದ ಬಳಿಕ ಮೃತದೇಹವನ್ನು ತುಂಡು ಮಾಡಲಾಗಿತ್ತೇ ಅಥವಾ ಹೊಡೆದು ಸಾಯಿಸಿರಬಹುದೇ ಎಂದು ಪೊಲೀಸರು ತನಿಖೆ ನಡೆಸಬೇಕಾಗುತ್ತದೆ. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ಈ ಎಲ್ಲಾ ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಬರೋಬ್ಬರಿ 2 ಗಂಟೆಗಳ ಕಾಲ ವೈದ್ಯರು ಮೃತದೇಹವನ್ನು ರೆಸೆಂಬಲ್ ಮಾಡಿ ಪರೀಕ್ಷೆ ನಡೆಸಬೇಕಾಯಿತು.

ಮಹಾಲಕ್ಷ್ಮಿ ಆಪ್ತನಾಗಿದ್ದವನೇ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಯಾಕೆಂದರೆ ಆತನ ಫೋನ್ ಕೂಡಾ ಸ್ವಿಚ್ ಆಫ್ ಬರುತ್ತಿರುವುದೇ ಇದಕ್ಕೆ ಕಾರಣ. ತಾನು ಕೆಲಸ ಮಾಡುತ್ತಿದ್ದ ಕಡೆ ಸಹೋದ್ಯೋಗಿಗಳ ಜೊತೆಗೂ ಮಹಾಲಕ್ಷ್ಮಿಗೆ ಕಿರಿಕ್ ಆಗಿತ್ತು ಎಂಬುದನ್ನು ಆಕೆಯ ಕುಟುಂಬದವರೇ ಮಾಹಿತಿ ನೀಡಿದ್ದಾರೆ. ಅತ್ತ ಪತಿ ಜೊತೆಯೂ ಕಿರಿಕ್ ಮಾಡಿಕೊಂಡು ದೂರವಾಗಿದ್ದಳು. ಇದೀಗ ಆಕೆಯ ಜೊತೆ ಆಪ್ತನಾಗಿದ್ದವನ ಜೊತೆಗೆ ಕಿರಿಕ್ ಆಗಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳ ಮಾಜಿ ಸಿಎಂ ವಿಎಸ್ ಅಚ್ಯುತಾನಂದನ್ ಇನ್ನಿಲ್ಲ

ಕೂಡಲಸಂಗಮದ ಸ್ವಾಮೀಜಿಯನ್ನು ಮುಗಿಸುವ ಯತ್ನ: ಅರವಿಂದ ಬೆಲ್ಲದ ಆರೋಪ

ಸಿದ್ದರಾಮಯ್ಯಗೆ ಮುಡಾ ರಿಲೀಫ್: ಸತ್ಯವೇ ಗೆದ್ದಿದೆ ಎಂದ ರಣದೀಪ್ ಸುರ್ಜೇವಾಲ

ಮುಂಬೈ, ಲ್ಯಾಂಡಿಂಗ್ ವೇಳೆ ರನ್‌ ವೇಯಿಂದ ಜಾರಿದ ಏರ್‌ ಇಂಡಿಯಾ ವಿಮಾನ, ದೊಡ್ಡ ಅವಘಡದಿಂದ ಜಸ್ಟ್‌ ಮಿಸ್‌

ತೆರಿಗೆ ಶಾಕ್‌ಗೆ ಬೆಚ್ಚಿದ ವ್ಯಾಪಾರಿಗಳು, ಜುಲೈ 25ರಂದು ಅಂಗಡಿ, ಮುಂಗಟ್ಟು ಬಂದ್‌ಗೆ ನಿರ್ಧಾರ

ಮುಂದಿನ ಸುದ್ದಿ
Show comments