Webdunia - Bharat's app for daily news and videos

Install App

ನಿಖಿಲ್ ಕುಮಾರಸ್ವಾಮಿ ಟಾಂಗ್ ಗೆ ತಿರುಗೇಟು

Webdunia
ಶನಿವಾರ, 5 ಮೇ 2018 (13:40 IST)
ರಾಮನಗರ: ನಾನು ಚುನಾವಣೆ ಮುಗಿಯೋವರೆಗೂ ಆ ವಿಚಾರ ಮಾತನಾಡಲ್ಲ. ಚುನಾವಣೆ ಮುಗಿಲಿ ಅಮೇಲೆ ಸಿಡಿ ವಿಚಾರ ಮಾತನಾಡ್ತೀನಿ. ಉತ್ತರ ಕೊಡ್ತೀನಿ, ಅವರು ಫಿಲಿಂ ಆಕ್ಟರ್, ಏನೋ ಬಂದು ಫಿಲಿಂ ಆಕ್ಟಿಂಗ್ ತರಹ ಮಾತಾಡಿ ಹೋಗಿದ್ದಾರೆ. ಅವರಿಗೆ ಒಳ್ಳೆದಾಗಲಿ ಎಂದು ಮಾಗಡಿ ಕ್ಷೇತ್ರದ ಅಭ್ಯರ್ಥಿ ಎಚ್.ಸಿ ಬಾಲಕ್ರಷ್ಣ, ಯುವನಾಯಕ ನಿಖಿಲ್ ಕುಮಾರಸ್ವಾಮಿ ನೀಡಿದ ಟಾಂಗ್ ಗೆ ತಿರುಗೇಟು ನೀಡಿದ್ದಾರೆ.
ರಾಮನಗರ ಜಿಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ಒಂದಲ್ಲ, ಒಂದ್ರೀತಿಲಿ ಒಂದೊಂದು ಹೊಸತರ ತಿರುವುಗಳನ್ನ ಪಡಿತಿದೆ. ಅದೇ ರೀತಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್,  ಜೆಡಿಎಸ್ ನಡುವೆ ಜಿದ್ದಾಜಿದ್ದಿನೆ ಸೃಷ್ಟಿಯಾಗ್ತಿದೆ. 
 
ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ಪ್ರಚಾರದ ವೇಳೆ, ಜೆಡಿಎಸ್ ನ ನಿಖಿಲ್ ನಮ್ಮ ಬಗ್ಗೆ ಮಾತನಾಡಿದ್ರೆ ಅವರ ಕ್ಯಾಸೆಟ್ಟುಗಳನ್ನ ಬಿಡುಗಡೆ ಮಾಡ್ತೀವಿ ಅಂತ ಬಹಿರಂಗ ಸಭೆಯಲ್ಲಿ ಹೇಳಿದ್ದ ಹೇಳಿಕೆಗೆ ನಿಖಿಲ್ ಬಿಡದಿ ಬಳಿಯ ಮಾಯಗಾನಹಳ್ಳಿಯಲ್ಲಿ ತಾಕತ್ತಿದ್ದರೆ ಬಿಡುಗಡೆ ಮಾಡಲಿ ಅಂತ ಬಹಿರಂಗ ಸವಾಲು ಹಾಕಿದ್ರು. 
 
ಸವಾಲಿಗೆ ಸವಾಲು ಅಂತ ಎಚ್.ಸಿ ಬಾಲಕೃಷ್ಣ ನಾನು ಆ ರೀತಿ ಹೇಳಿಲ್ಲ ಅಂತ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ರು. ಅದಕ್ಕೆ ಟಾಂಗ್ ನೀಡಿದ ನಿಖಿಲ್ ಹಾಗಾದ್ರೆ ಅವರು ಹೇಳಿರೊ ಸಿಡಿ ನನ್ನ ಸಿನೆಮಾ ಜಾಗ್ವಾರ್ ದಿರಬೇಕು ಎಂದು ವ್ಯಂಗ್ಯವಾಡಿದ್ರು.
 
ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ನನ್ನ ಕ್ರಮ ಸಂಖ್ಯೆಯನ್ನ ತಮ್ಮ ಕರ ಪತ್ರಗಳಲ್ಲಿ ತಪ್ಪಾಗಿ ನಮೂದಿಸಿ, ಮತದಾರರನ್ನ ದಾರಿ ತಪ್ಪಿಸುತ್ತಿದ್ದಾರೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ ಎಂಬ ಆರೋಪಕ್ಕೆ ಉತ್ತರಿಸಿದ ಬಾಲಕೃಷ್ಣ, ಆ ರೀತಿಯಾಗಿ ತಪ್ಪಾಗಿದ್ದರೆ ತಿದ್ದು ಕೊಳ್ಳುತ್ತೇವೆ. ಅವರು ಕೇಸು ದಾಖಲಿಸುವುದಾದರೆ ದಾಖಲಿಸಲಿ ನಮ್ಮದೇನು ಅಭ್ಯಂತರ ಇಲ್ಲ 
 
 ಹೆಚ್.ಎಂ.ರೇವಣ್ಣ ಹಾಗೂ ಸಿ.ಎಂ.ಲಿಂಗಪ್ಪ ನಮಗೆ ಕೈಜೋಡಿಸಿರುವುದು ಆನೆ ಬಲಬಂದಂತಾಗಿದೆ. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಮಿತ್ರರು ಇಲ್ಲ . ಚುನಾವಣಾ ಪ್ರಚಾರ ಅದ್ದೂರಿಯಾಗಿ ನಡೆಯುತ್ತಿದೆ, ನನಗೆ ಎಲ್ಲರು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ ಎಂದು ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಭಾಗದ ಚುನಾವಣಾ ಪ್ರಚಾರದ ವೇಳೆ ಬಾಲಕೃಷ್ಣ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ:ವಿಜಯೇಂದ್ರ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ: ಎಸ್.ಆರ್.ವಿಶ್ವನಾಥ್

ಟಿಪ್ಪು ಸುಲ್ತಾನ್ ದಸರಾ ಮಾಡಿದ್ರು: ತನ್ವೀರ್ ಸೇಠ್ ಹೇಳಿಕೆ

ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿ ಒಪ್ಪಿ ಬರ್ತಾರಾ: ಬಿವೈ ವಿಜಯೇಂದ್ರ

ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಗೆ ಸೂಚಿಸಿದ ದೆಹಲಿ ನಾಯಕ ಯಾರು: ತೇಜಸ್ವಿ ಸೂರ್ಯ

ಮುಂದಿನ ಸುದ್ದಿ
Show comments