Select Your Language

Notifications

webdunia
webdunia
webdunia
webdunia

ಬಿ.ಜಿ. ಪುಟ್ಟಸ್ವಾಮಿಗೆ ನೇಣು ಹಾಕಿಕೊಳ್ಳಲು ಹೇಳಿ: ಸಿಎಂ ತಿರುಗೇಟು

ಬಿ.ಜಿ. ಪುಟ್ಟಸ್ವಾಮಿಗೆ ನೇಣು ಹಾಕಿಕೊಳ್ಳಲು ಹೇಳಿ: ಸಿಎಂ ತಿರುಗೇಟು
ಬೆಂಗಳೂರು , ಸೋಮವಾರ, 16 ಅಕ್ಟೋಬರ್ 2017 (13:20 IST)
ಬಿಜೆಪಿ ಮುಖಂಡ ಬಿ.ಜಿ.ಪುಟ್ಟಸ್ವಾಮಿ ನಾನು ಮಾಡಿದ ಆರೋಪಗಳು ಸುಳ್ಳು ಎಂದಾದಲ್ಲಿ ವಿಧಾನಸೌಧದ ಮುಂದೆ ನೇಣುಹಾಕಿಕೊಳ್ಳುತ್ತೇನೆ ಎಂದಿದ್ದರು. ಇದೀಗ ಆರೋಪಗಳು ಸುಳ್ಳಾಗಿವೆ. ಏನ್ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಸಾಬೀತುಪಡಿಸಬೇಕಾಗಿದ್ದು ಅವರೇ. ಇದೀಗ ಆರೋಪ ಸುಳ್ಳಾಗಿದೆ. ಆರೋಪ ಸುಳ್ಳು ಎಂದು ಸಾಬೀತಾದಲ್ಲಿ ವಿಧಾನಸೌಧದ ಮುಂದೆ ನೇಣುಹಾಕಿಕೊಳ್ಳುವುದಾಗಿ ಹೇಳಿದ್ದರು ಇದೀಗ ನೇತುಹಾಕಿಕೊಳ್ಳುವಂತೆ ಹೇಳಿ ಎಂದು ಗುಡುಗಿದ್ದಾರೆ.
 
ನೇಣುಹಾಕಿಕೊಳ್ಳಿ ಎಂದು ನಾನು ಹೇಳಲ್ಲ. ಆದರೆ. ಬೇರೆಯವರ ಮೇಲೆ ಆರೋಪ ಮಾಡುವ ಮುನ್ನ ಯೋಚಿಸಬೇಕು. ಸುಳ್ಳು ಆರೋಪಗಳನ್ನು ಮಾಡುವುದರಿಂದ ಯಾವುದೇ ಸಾಧನೆ ಮಾಡಿದಂತಾಗುವುದಿಲ್ಲ ಎಂದು ತಿಳಿಸಿದ್ದಾರೆ.
 
ಸರಕಾರ ಪಾರದರ್ಶಕವಾಗಿ ರೈತರ , ಜನತೆಯ, ಶೋಷಿತರ, ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿಯಂತೆ ಕೋಮುವಾದ ಹರಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೊಡ್ಡೆಮ್ಮೆ ಅಲ್ಲ ಒಳ್ಳೇ ಹಾಲು ಕೊಡುವ ಎಮ್ಮೆ: ಸಚಿವ ಅಂಜನೇಯ