Select Your Language

Notifications

webdunia
webdunia
webdunia
webdunia

ಯುವತಿಯರ ಜೊತೆ ನಡುರಾತ್ರಿ ತಿರುಗಾಡುತ್ತಿದ್ದ ಯುವಕರ ಮೇಲೆ ಹಲ್ಲೆ?

ಯುವತಿಯರ ಜೊತೆ ನಡುರಾತ್ರಿ ತಿರುಗಾಡುತ್ತಿದ್ದ ಯುವಕರ ಮೇಲೆ ಹಲ್ಲೆ?
ಮಂಗಳೂರು , ಭಾನುವಾರ, 11 ಡಿಸೆಂಬರ್ 2022 (14:45 IST)
ಮಂಗಳೂರು : ನಗರದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದೆ. ಸುಳ್ಯದಲ್ಲಿ ಮುಸ್ಲಿಂ ಜೋಡಿಗೆ ಮುಸ್ಲಿಂ ಯುವಕರೇ ಹಲ್ಲೆ ನಡೆಸಿದ ಘಟನೆಯ ನೆನಪು ಮಾಸುವ ಮೊದಲೇ ಮತ್ತೆ ಮಂಗಳೂರು ನಗರದಲ್ಲಿ ಹಲ್ಲೆಗೆ ಯತ್ನ ನಡೆದಿದೆ.

ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯರು ತಡ ರಾತ್ರಿ ಸುತ್ತಾಡುತ್ತಿದ್ದುದನ್ನು ನೋಡಿದ್ದ ಬಜರಂಗದಳದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದ ಕರಾವಳಿಯಲ್ಲಿ ನೈತಿಕ ಪೊಲೀಸ್ಗಿರಿ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಬಾರಿಯೂ ಆಗ್ಗಾಗ್ಗೆ ನೈತಿಕ ಪೊಲೀಸ್ ಗಿರಿ ಬೆಳಕಿಗೆ ಬರುತ್ತಿದೆ. ಕಳೆದ 2 ದಿನದ ಹಿಂದೆ ಸುಳ್ಯದ ಸಂತೋಷ್ ಚಿತ್ರ ಮಂದಿರಕ್ಕೆ ಕಾಂತಾರ ಚಿತ್ರ ನೋಡಲು ಬಂದ ಮುಸ್ಲಿಂ ಜೋಡಿಗೆ ಹಿಗ್ಗಾಮುಗ್ಗ ಥಳಿಸಲಾಗಿತ್ತು.

ಹಿಂದೂ ಧರ್ಮದ ದೈವಾರಾಧನೆಗೆ ಸಂಬಂಧಿಸಿದ ಕಾಂತಾರ ಚಿತ್ರವನ್ನು ನೋಡಲು ಬಂದಿದ್ದ ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ಮುಸ್ಲಿಂ ಯುವಕರೇ ಹಲ್ಲೆ ನಡೆಸಿದ್ದರು. ಕಾಂತಾರ ಚಿತ್ರವನ್ನು ನೋಡದಂತೆ ತಾಕೀತು ಮಾಡಿದ್ದರು.

ಸುಳ್ಯದ ಹಲ್ಲೆಯ ಘಟನೆಯ ನೆನಪು ಮಾಸುವ ಮೊದಲೇ ನಿನ್ನೆ ತಡ ರಾತ್ರಿ ಬಜರಂಗದಳದ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿಗೆ ಯತ್ನಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಪತ್ನಿಗೆ ಹೀಗೆ ಮಾಡೋದಾ!?