Select Your Language

Notifications

webdunia
webdunia
webdunia
webdunia

ಚರ್ಚ್ ಮೇಲೆ ದುಷ್ಕರ್ಮಿಗಳಿಂದ ದಾಳಿ ; ಏಸು ಕ್ರಿಸ್ತ ಮೂರ್ತಿ ಧ್ವಂಸ

ಚರ್ಚ್ ಮೇಲೆ ದುಷ್ಕರ್ಮಿಗಳಿಂದ ದಾಳಿ ; ಏಸು ಕ್ರಿಸ್ತ ಮೂರ್ತಿ ಧ್ವಂಸ
ಬೆಂಗಳೂರು , ಮಂಗಳವಾರ, 21 ಜನವರಿ 2020 (19:44 IST)
ದುಷ್ಕರ್ಮಿಗಳು ಚರ್ಚ್ ವೊಂದರ ಮೇಲೆ ದಾಳಿ ನಡೆಸಿದ್ದು, ಚರ್ಚ್ ನಲ್ಲಿದ್ದ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ.

ಬೆಂಗಳೂರಿನ ಕೆಂಗೇರಿ ಹತ್ತಿರದ ಸೇಂಟ್ ಫ್ರಾನ್ಸಿಸ್ ಅಸ್ಸಿಸ್ ಚರ್ಚ್ ನಲ್ಲಿ ದಾಳಿ ಮಾಡಲಾಗಿದ್ದು, ಕ್ರಿಸ್ತನ ಪ್ರತಿಮೆ, ಮೂರ್ತಿ ಹಾಗೂ ಪೂಜಾ ಸಾಮಗ್ರಿಗಳನ್ನು ಧ್ವಂಸಗೊಳಿಸಲಾಗಿದೆ.

ನಂಬಿಕೆ ಹಾಗೂ ಭಾವನೆಗಳನ್ನು ದುಷ್ಕರ್ಮಿಗಳು ಕೆರಳಿಸಲು ಈ ದುಷ್ಕೃತ್ಯ ನಡೆಸಿದ್ದಾರೆ ಅಂತ ಚರ್ಚ್ ನ ಸಿಬ್ಬಂದಿ ಹೇಳಿದ್ದಾರೆ.
ಕೆಂಗೇರಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ನರೇಂದ್ರ ಮೋದಿ, ಯಡಿಯೂರಪ್ಪ ದೇಶ ವಿರೋಧಿಗಳು’