Publish Date: Thu, 18 Feb 2021 (12:00 IST)
Updated Date: Thu, 18 Feb 2021 (12:05 IST)
ಬೆಂಗಳೂರು : ನಿಗಮ ಮಂಡಳಿಯಲ್ಲಿ ಸ್ಥಾನ ಪಡೆದವರ ಬಗ್ಗೆ ಶಾಸಕ ಯತ್ನಾಳ್ ಅವಮಾನೀಯ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಅವರ ವಿರುದ್ಧ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ದೂರು ನೀಡಲು ನಿರ್ಧಾರ ಮಾಡಿದ್ದಾರೆ.
ವಿಜಯೇಂದ್ರ ಕಾಲು ಒತ್ತುವವರಿಗೆ ನಿಗಮ ಸ್ಥಾನ ಸಿಗುತ್ತದೆ ಎಂದು ಯತ್ನಾಳ್ ಅವಮಾನೀಯ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿರುದ್ಧ ಅರುಣ್ ಸಿಂಗ್ ಆಕ್ರೋಶಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ದೂರು ನೀಡಲು ನಿಗಮ ಮಂಡಳಿ ಅಧ್ಯಕ್ಷರು ನಿರ್ಧಾರ ಮಾಡಿದ್ದಾರೆ. 25ಕ್ಕೂ ಹೆಚ್ಚು ನಿಗಮ ಮಂಡಳಿ ಅಧ್ಯಕ್ಷರು ದೂರು ನೀಡಲಿದ್ದಾರೆ ಎನ್ನಲಾಗಿದೆ.