Publish Date: Thu, 18 Feb 2021 (07:00 IST)
Updated Date: Thu, 18 Feb 2021 (07:01 IST)
ಬೆಂಗಳೂರು : ಅರಳೀಮರವನ್ನು ಹಿಂದೂಧರ್ಮದಲ್ಲಿ ದೇವರೆಂದು ಪೂಜಿಸುತ್ತಾರೆ. ಆದರೆ ಈ ಅರಳೀಮರದಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರ ತೊಗಟೆಯಿಂದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಚರ್ಮದ ಸುಕ್ಕುಗಳನ್ನು ತೆಗೆದುಹಾಕಲು ಮತ್ತು ಕಲೆರಹಿತ ಚರ್ಮವನ್ನು ಪಡೆಯಲು ಅರಳೀಮರದ ತೊಗಟೆಯನ್ನು ಬಳಸಿ. ಇದರ ತೊಗಟೆಯನ್ನು ಪುಡಿಮಾಡಿ ಮುಖಕ್ಕೆ ಹಚ್ಚಿ. ಕಾಲುಗಳಲ್ಲಿ ಬಿರುಕು ಮೂಡಿದ್ದರೆ ಅರಳೀಮರದ ತೊಗಟೆ ಪುಡಿಯನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಪಾದದ ಮೇಲೆ ಹಚ್ಚಿ. ಇದನ್ನು ಪ್ರತಿದಿನ ರಾತ್ರಿ ಮಾಢಿ. ಬೆಳಿಗ್ಗೆ ನೀರಿನಿಂದ ವಾಶ್ ಮಾಡಿ.