ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟಿದ್ದ ಕಲಾವಿದ! ಮುಂದೇನಾಯ್ತು?

Webdunia
ಸೋಮವಾರ, 11 ಏಪ್ರಿಲ್ 2022 (09:41 IST)
ಚಿತ್ರದುರ್ಗ : ಆತ ಯಾರ ಸಹವಾಸಕ್ಕೂ ಹೋಗದೇ ತನ್ನ ಪಾಡಿಗೆ ತಾನು ಗೂಡಂಗಡಿ ಇಟ್ಕೊಂಡು ಜೀವನ ಸಾಗಿಸ್ತಿದ್ದ ವ್ಯಕ್ತಿ.

ಸಿನಿಮಾದಲ್ಲಿ ವಿಲನ್ ಪಾರ್ಟ್ ಮಾಡುತ್ತಿದ್ದ ಪಕ್ಕದ ಮನೆಯವ ರಿಯಲ್ ಲೈಫ್ನಲ್ಲೂ ವಿಲನ್ ರೀತಿ ವರ್ತಿಸಿ ಆತನ ತಲೆ ಕಡಿದು ಜಮೀನಿನಲ್ಲಿ ಹೂತಾಕಿರೋ ಘಟನೆ ಚಿತ್ರದುರ್ಗ  ಜಿಲ್ಲೆಯಲ್ಲಿ ನಡೆದಿದೆ.

ಹೀಗೆ ತನ್ನ ಗಂಡನನ್ನು ಕಳೆದುಕೊಂಡ ನೋವಿನಲ್ಲಿ ಮಕ್ಕಳೊಂದಿಗೆ ನಡು ರಸ್ತೆಯಲ್ಲೇ ಕಣ್ಣೀರು ಹಾಕ್ತಿರೋ ಗಂಗಮ್ಮ. ಅತ್ತ ತಲೆ ಬೇರ್ಪಟ್ಟು ಶವವಾಗಿ ಮಲಗಿರೋ ಮೃತ ದುರ್ದೈವಿ ರಮೇಶ (45).

ಇಂತಹ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶ್ರವಣಗೆರೆ ಗ್ರಾಮ. ಮೃತ ದುರ್ದೈವಿ ರಮೇಶ ಹಾಗೂ ಪಕ್ಕದ ಮನೆಯಲ್ಲೇ ಇದ್ದ ಶ್ರೀನಿವಾಸ್ ಅಲಿಯಾಸ್ ರೌಡಿ ಸೀನ. ಇಬ್ಬರು ಮೊದಲಿನಿಂದಲೂ ಉತ್ತಮ ಸ್ನೇಹಿತರು.

ಇಬ್ಬರೂ ನಿನ್ನೆ ಸಂಜೆಯವರೆಗೂ ಎಣ್ಣೆ ಹೊಡೆದುಕೊಂಡೆ ಜೊತೆಯಲ್ಲೇ ಓಡಾಡಿದ್ದರು. ಆದರೆ ರಮೇಶ ತಮ್ಮದೇ ಇನ್ನೊಂದು ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಎಲ್ಲರೂ ಮಲಗಿದ ವೇಳೆ ಸ್ಕೆಚ್ ಹಾಕಿ ಸೀನ ಮನೆಗೆ ನುಗ್ಗಿ, ರಮೇಶನ ಕತ್ತು ಕತ್ತರಿಸಿ ಊರಾಚೆ ಇರುವ ಜಮೀನಿನಲ್ಲಿ ಊತಿಟ್ಟಿದ್ದಾನೆ.

ನಂತರ ಆ ಕೊಲೆಗೂ ನನಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮ ಮನೆಯಲ್ಲಿ ಅರಾಮಗಿ ಮಲಗಿದ್ದಾನೆ ಭೂಪ. ಇತ್ತ ಕೊಲೆಗೆ ಕಾರಣ ಏನಿರಬಹುದು ಎಂದು ಕೆದಕಿದಾಗ, ರೌಡಿ ಸೀನ ನನಗೆ ಯಾರೋ ವಾಮಾಚಾರ ಮಾಡಿಸಿದ್ದಾರೆ.

ಅದಕ್ಕಾಗಿಯೇ ನಮ್ಮ ಸಂಸಾರ ಸರಿಯಿಲ್ಲ ಎಂದೆಲ್ಲಾ ಮೂಢನಂಬಿಕೆಯ ಅನುಮಾನ ಇಟ್ಟುಕೊಂಡು ಓಡಾಡುತ್ತಿದ್ದನಂತೆ. ಆದರೆ ಅಮಾಯಕ ರಮೇಶ ಮಾತ್ರ ಸೀನನ ಅನುಮಾನಕ್ಕೆ ತುತ್ತಾಗಿ ಕೊಲೆಯಾಗಿರೋದು ದುರಂತ ಅಂತಿದ್ದಾರೆ ಸ್ಥಳೀಯರು.

ಒಟ್ಟಾರೆಯಾಗಿ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದ ಆಸಾಮಿ ಈಗ ನಿಜ ಜೀವನದಲ್ಲೇ ವಿಲನ್ ಆಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇಡೀ ಗ್ರಾಮದಲ್ಲೇ ಒಂದು ಸಣ್ಣ ಕ್ರೈಂ ನಡೆದಿರಲಿಲ್ಲ ಆದರೆ ಈ ಕೊಲೆ ಇಡೀ ಸುತ್ತಮುತ್ತಲಿನ ಜನರಲ್ಲಿ ನಿದ್ದೆಗೆಡಿಸಿರೋದು ಗ್ಯಾರಂಟಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಎಸ್‌ಎಸ್‌ ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರವಲ್ಲ: ಮತ್ತೇ ಕುಟುಕಿದ ಪ್ರಿಯಾಂಕ್ ಖರ್ಗೆ

ತೇಜಸ್ವಿ ಸಿಎಂ ಆಗಲು, ರಾಹುಲ್‌ ಪ್ರಧಾನಿಯಾಗಲು ಮತದಾರರಿಗೆ ವಿಶೇಷ ಮನವಿಯಿಟ್ಟ ಡಿಕೆ ಶಿವಕುಮಾರ್

ಚಿಕನ್ ಫ್ರೈಗಾಗಿ ಯುದ್ಧಭೂಮಿಯಂತಾದ ಮದುವೆ ಮಂಟಪ, ಅಂಥಾದೇನಾಯಿತು ಗೊತ್ತಾ

ಮೋದಿ, ನಿತೇಶ್ ಜೋಡಿ ಬಿಹಾರವನ್ನು ಜಂಗಲ್ ರಾಜ್‌ನಿಂದ ಮುಕ್ತಗೊಳಿಸಿದರು: ಅಮಿತ್ ಶಾ

ಮುಂದಿನ ಸುದ್ದಿ
Show comments