Select Your Language

Notifications

webdunia
webdunia
webdunia
webdunia

ಪಕ್ಷಾಂತರಿಗಳು ನಾಯಿಗಿಂತ ಕಡೆ ಎಂದೋರಾರು?

ಪಕ್ಷಾಂತರಿಗಳು ನಾಯಿಗಿಂತ ಕಡೆ ಎಂದೋರಾರು?
ಮೈಸೂರು , ಭಾನುವಾರ, 28 ಏಪ್ರಿಲ್ 2019 (17:36 IST)
ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡೋರು ನಾಯಿಗಳಿಗಿಂತ ಕಡೆ. ಹೀಗಂತ ಮಾಜಿ ಶಾಸಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷಾಂತರ‌ ಮಾಡುವವರು ನಾಯಿಗಳಿಗಿಂತ ಕಡೆಯಾಗಿದ್ದಾರೆ. ಹೀಗಂತ ಮೈಸೂರಿನಲ್ಲಿ ಮಾಜಿ ಶಾಸಕ ವಾಟಾಳ್ ನಾಗರಾಜ್ ದೂರಿದ್ದಾರೆ.

ಪಕ್ಷಾಂತರ ಮಾಡುವ ರಾಜಕೀಯ ನಾಯಕರ ವಿರುದ್ಧ ವಾಟಾಳ್ ನಾಗರಾಜ್ ಏಕಾಂಗಿ ಪ್ರತಿಭಟನೆ ನಡೆಸಿದ್ರು. ಮೈಸೂರು ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ಮಾಡಿದ ಅವರು, ಪಕ್ಷಾಂತರ ಮಾಡುವ ನಾಯಕರಿಗೆ 10 ವರ್ಷ ಪಕ್ಷದಿಂದ ವಜಾ ಮಾಡಿ, ಎರಡು ವರ್ಷ ಜೈಲು ಶಿಕ್ಷೆ ನೀಡಬೇಕು ಎಂದರು.

ಚುನಾವಣೆಗೆ ರಾಜ್ಯದಲ್ಲಿ ಎಲ್ಲಾ ಪಕ್ಷದವರು ನಾಲ್ಕು ಸಾವಿರ ಕೋಟಿಗೂ ಹೆಚ್ಚು  ಹಣ ಖರ್ಚು ಮಾಡಿದ್ದಾರೆ. ಆದರೂ ಚುನಾವಣಾ ಆಯೋಗ ಕುರುಡಾಗಿದೆ ಎಂದಿದ್ದಾರೆ. ಈ ಚುನಾವಣೆಯನ್ನ ರದ್ದು ಮಾಡಿ ಮತ್ತೆ ಚುನಾವಣೆ ನಡೆಸಬೇಕು.

ಈಗ ನಡೆಯುತ್ತಿರುವ ಚುನಾವಣೆ ಹಣ, ಜಾತಿ ಬಲದ ಮೇಲೆ ನಡೆಯುತ್ತಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರದ ವಿರುದ್ಧ ಸಿಡಿದೆದ್ದ ಕೈ ಶಾಸಕರು?