Select Your Language

Notifications

webdunia
webdunia
webdunia
webdunia

ಹಬ್ಬಕ್ಕೆಂದು ಊರಿಗೆ ಬಂದವ ಸ್ನೇಹಿತನಿಂದಲೇ ಅಂದರ್!

ಹಬ್ಬಕ್ಕೆಂದು ಊರಿಗೆ ಬಂದವ ಸ್ನೇಹಿತನಿಂದಲೇ ಅಂದರ್!
ಬಾಗಲಕೋಟೆ , ಸೋಮವಾರ, 5 ಸೆಪ್ಟಂಬರ್ 2022 (12:29 IST)
ಬಾಗಲಕೋಟೆ : ಹಬ್ಬದ ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದ ಯುವಕನನ್ನು ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಮಲ್ಲಮ್ಮ ನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಮೆಹಬೂಬ್(22) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಮೆಹಬೂಬ್ ಅನ್ನು ಆತನ ಸ್ನೇಹಿತ ಭದ್ರೇಶ್ ಹತ್ಯೆಗೈದಿದ್ದಾನೆ. ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಮೆಹಬೂಬ್, ಪ್ರತಿ ಹಬ್ಬದ ದಿನಗಳಲ್ಲಿ ರಜೆ ಸಿಗುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಊರಿಗೆ ಬರುತ್ತಿದ್ದನು.

ಹೀಗೆ ಬಂದ ಮೆಹಬೂಬ್ನನ್ನು ಸ್ನೇಹಿತ ಭದ್ರೇಶ್ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಇತ್ತ ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬ ಆಗ್ರಹಿಸಿದೆ.

ಕಳೆದ 5 ವರ್ಷದ ಹಿಂದೆ ಭದ್ರೇಶ್ ಮತ್ತು ಮೆಹಬೂಬ್ ನಡುವೆ ಸಣ್ಣ ಜಗಳವಾಗಿತ್ತು. ಇದೇ ಸೇಡು ಇಟ್ಟಕೊಂಡಿದ್ದ ಭದ್ರೇಶ್, ಮೊನ್ನೆ ರಾತ್ರಿ ಅಂಗನವಾಡಿ ಬಳಿ ಸ್ನೇಹಿತರೊಟ್ಟಿಗೆ ಕೂತಿದ್ದ ಮಹಬೂಬ್ಗೆ ಎದೆ, ಕುತ್ತಿಗೆ, ಹೊಟ್ಟೆ ಸೇರಿ ಹಲವೆಡೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುರುಘಾ ಮಠ : ಇಂದು ಸಾಮೂಹಿಕ ಕಲ್ಯಾಣ ಮಹೋತ್ಸವ