Webdunia - Bharat's app for daily news and videos

Install App

ಆನಂದ ಅಸ್ನೋಟಿಕರ್ ಗೆ ಪರಮ ನೀಚ ಎಂದವರಾರು?

Webdunia
ಸೋಮವಾರ, 2 ಜುಲೈ 2018 (17:34 IST)
ಅನಂತಕುಮಾರ ಹೆಗಡೆ ಅವರನ್ನು ನೀಚ ಎಂದು ಕರೆದಿರುವ ಆನಂದ್ ಅಸ್ನೋಟಿಕರ ಪರಮ ನೀಚ ಎಂದು ಹಳಿಯಾಳದ ಮಾಜಿ ಶಾಸಕ ಸುನೀಲ್ ಹಗಡೆ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ದೇಶಪಾಂಡೆಯವರ ಕಾಲು ನೆಕ್ಕುವ ಮಟ್ಟಿಗೆ ಆನಂದ್ ತಲುಪಿದ್ದಾರೆ. ಅವರ ಹಿಂದೆಯೇ ಅಲೆಯುತ್ತಿದ್ದಾರೆ. ಕಾಂಗ್ರೆಸ್ ಹಾಗೂ ದೇಶಪಾಂಡೆ ಅವರನ್ನು ಬ್ಲಾಕ್‍ಮೇಲ್ ಮಾಡಲು ಆನಂದ್ ಈ ರೀತಿ ಮಾಡುತ್ತಿದ್ದಾರೆ. ಅನಂತಕುಮಾರ ಅವರ ಬಗ್ಗೆ ಅವರು ನೀಡಿರುವ ಹೇಳಿಕೆಯನ್ನ್ನು ಖಂಡಿಸುತ್ತೇನೆ ಎಂದರು.
ಕಾಗೇರಿ ಅವರ ಮೇಲೆ ಅನಂತಕುಮಾರ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿಕೆ ಕೊಡುವ ಆನಂದ ಅಸ್ನೋಟಿಕರ ಅವರ ಮೇಲೆಯೇ ಈ ಹಿಂದೆ ಗೋವಾದಲ್ಲಿ ಹಲ್ಲೆಯಾಗಿದೆ. ಕ್ಯಾಸಿನೋದಲ್ಲಿ ಬೌನ್ಸರ್‍ಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಅಲ್ಲಿ ಯಾವ ರಾಜಕೀಯಕ್ಕಾಗಿ ಹೋದವರಲ್ಲ. ತಮ್ಮ ತೆವಲು ತೀರಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ. ಅನಂತಕುಮಾರ ಅವರನ್ನು ನಿಂದಿಸಲು ಆನಂದ ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ.

ಆನಂದ ರಾಜಕೀಯಕ್ಕೆ ಅಪ್ರಯೋಜಕರು. ಬಿಜೆಪಿಯಲ್ಲಿದ್ದ ವೇಳೆ ಆನಂದ ಹಲವಾರು ಬಾರಿ ಕಾಗೇರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬೈದಿದ್ದಾರೆ. ಆನಂದ ಅವರಿಗೆ ಬೆಂಬಲ ನೀಡಿ ಮಂತ್ರಿ ಮಾಡುವಲ್ಲಿ ಅನಂತಕುಮಾರ ಅವರು ಸಹಾಯ ಮಾಡಿದ್ದರು. ಆದರೆ ಆ ನಿಷ್ಠೆಯನ್ನು ಇಟ್ಟುಕೊಳ್ಳದ ಕಾರಣ ಈ ಬಾರಿ ಅವರನ್ನು ದೂರವಿಟ್ಟಿದ್ದು. ಕುಮಾರಸ್ವಾಮಿ ಹಾಗೂ ದೇವೇಗೌಡರ ಬಳಿ ತಾನು ದೊಡ್ಡ ನಾಯಕ ಎಂಬುದನ್ನು ತೋರಿಸಿಕೊಳ್ಳಲು ಈಗ ಅವರು ಪ್ರಯತ್ನಿಸುತ್ತಿದ್ಧಾರೆ ಎಂದರು. ಇಂತಹ ನೀಚತನದ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ಮುದುವರೆಸಿದರೆ ಅವರು ಹೋದಲ್ಲೆಲ್ಲ ಬಿಜೆಪಿಯಿಂದ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments