Webdunia - Bharat's app for daily news and videos

Install App

ಆನಂದ ಅಸ್ನೋಟಿಕರ್ ಗೆ ಪರಮ ನೀಚ ಎಂದವರಾರು?

Webdunia
ಸೋಮವಾರ, 2 ಜುಲೈ 2018 (17:34 IST)
ಅನಂತಕುಮಾರ ಹೆಗಡೆ ಅವರನ್ನು ನೀಚ ಎಂದು ಕರೆದಿರುವ ಆನಂದ್ ಅಸ್ನೋಟಿಕರ ಪರಮ ನೀಚ ಎಂದು ಹಳಿಯಾಳದ ಮಾಜಿ ಶಾಸಕ ಸುನೀಲ್ ಹಗಡೆ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ದೇಶಪಾಂಡೆಯವರ ಕಾಲು ನೆಕ್ಕುವ ಮಟ್ಟಿಗೆ ಆನಂದ್ ತಲುಪಿದ್ದಾರೆ. ಅವರ ಹಿಂದೆಯೇ ಅಲೆಯುತ್ತಿದ್ದಾರೆ. ಕಾಂಗ್ರೆಸ್ ಹಾಗೂ ದೇಶಪಾಂಡೆ ಅವರನ್ನು ಬ್ಲಾಕ್‍ಮೇಲ್ ಮಾಡಲು ಆನಂದ್ ಈ ರೀತಿ ಮಾಡುತ್ತಿದ್ದಾರೆ. ಅನಂತಕುಮಾರ ಅವರ ಬಗ್ಗೆ ಅವರು ನೀಡಿರುವ ಹೇಳಿಕೆಯನ್ನ್ನು ಖಂಡಿಸುತ್ತೇನೆ ಎಂದರು.
ಕಾಗೇರಿ ಅವರ ಮೇಲೆ ಅನಂತಕುಮಾರ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿಕೆ ಕೊಡುವ ಆನಂದ ಅಸ್ನೋಟಿಕರ ಅವರ ಮೇಲೆಯೇ ಈ ಹಿಂದೆ ಗೋವಾದಲ್ಲಿ ಹಲ್ಲೆಯಾಗಿದೆ. ಕ್ಯಾಸಿನೋದಲ್ಲಿ ಬೌನ್ಸರ್‍ಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಅಲ್ಲಿ ಯಾವ ರಾಜಕೀಯಕ್ಕಾಗಿ ಹೋದವರಲ್ಲ. ತಮ್ಮ ತೆವಲು ತೀರಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ. ಅನಂತಕುಮಾರ ಅವರನ್ನು ನಿಂದಿಸಲು ಆನಂದ ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ.

ಆನಂದ ರಾಜಕೀಯಕ್ಕೆ ಅಪ್ರಯೋಜಕರು. ಬಿಜೆಪಿಯಲ್ಲಿದ್ದ ವೇಳೆ ಆನಂದ ಹಲವಾರು ಬಾರಿ ಕಾಗೇರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬೈದಿದ್ದಾರೆ. ಆನಂದ ಅವರಿಗೆ ಬೆಂಬಲ ನೀಡಿ ಮಂತ್ರಿ ಮಾಡುವಲ್ಲಿ ಅನಂತಕುಮಾರ ಅವರು ಸಹಾಯ ಮಾಡಿದ್ದರು. ಆದರೆ ಆ ನಿಷ್ಠೆಯನ್ನು ಇಟ್ಟುಕೊಳ್ಳದ ಕಾರಣ ಈ ಬಾರಿ ಅವರನ್ನು ದೂರವಿಟ್ಟಿದ್ದು. ಕುಮಾರಸ್ವಾಮಿ ಹಾಗೂ ದೇವೇಗೌಡರ ಬಳಿ ತಾನು ದೊಡ್ಡ ನಾಯಕ ಎಂಬುದನ್ನು ತೋರಿಸಿಕೊಳ್ಳಲು ಈಗ ಅವರು ಪ್ರಯತ್ನಿಸುತ್ತಿದ್ಧಾರೆ ಎಂದರು. ಇಂತಹ ನೀಚತನದ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ಮುದುವರೆಸಿದರೆ ಅವರು ಹೋದಲ್ಲೆಲ್ಲ ಬಿಜೆಪಿಯಿಂದ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mangalore Suhas Shetty: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ: ಮತ್ತೆ ಕೋಮುಗಲಭೆಯ ಆತಂಕ

Pakistan: ನೀವೇನೂ ಇಲ್ಲಿ ಬರೋದು ಬೇಡ: ತನ್ನ ಪ್ರಜೆಗಳಿಗೆ ತಾನೇ ಬಾಗಿಲು ತೆರೆಯದ ಪಾಕಿಸ್ತಾನ

ನಾಳೆ ದರ್ಶನ ನೀಡಲಿರುವ ಕೇದಾರನಾಥ, ಭಕ್ತರ ಸುರಕ್ಷತೆಗೆ ಬಿಗಿ ಬಂದೋಬಸ್ತ್‌

ಯುದ್ದವನ್ನು ಗೆದ್ದಿದ್ದೇವೆ ಎಂದು ಭಾವಿಸಬೇಡಿ, ತಕ್ಕ ಉತ್ತರ ನೀಡದೇ ಸುಮ್ಮನಿರಲ್ಲ: ಪಾಕ್‌ಗೆ ಅಮಿತ್ ಶಾ ಎಚ್ಚರಿಕೆ

ಜಾತಿ ಗಣತಿ: ರಾಹುಲ್ ಗಾಂಧಿಯನ್ನು ಹೆಚ್ಚು ಅಭಿನಂದಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments