Publish Date: Wed, 31 Jan 2018 (16:10 IST)
Updated Date: Wed, 31 Jan 2018 (16:11 IST)
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ಸಂಸದ ಪ್ರತಾಪಸಿಂಹ ಅವರ ಹಾಗೆ ನಾವೂ ಕೂಡ ಅಗ್ರೆಸ್ಸೀವ್ ಆಗಿ ಮಾತನಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣೆ ಪ್ರಚಾರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ಸಂಸದ ಪ್ರತಾಪಸಿಂಹ ಅವರ ಹಾಗೆ ಅಗ್ರೆಸ್ಸೀವ್ ಆಗಿ ಮಾತನಾಡುವವರು ಕಾಂಗ್ರೆಸ್ನಲ್ಲಿಲ್ಲ. ಆದರೆ, ಅವರು ಬಹಳ ಅಗ್ರೆಸ್ಸೀವ್ ಆಗಿ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.
ಅವರು ಮಾತನಾಡುವ ಶೈಲಿಯನ್ನು ಜನ ಇಷ್ಟಪಡುತ್ತಾರೆ. ಬಿಜೆಪಿಗೆ ನಕಾರಾತ್ಮಕತೆಗಿಂತ ಸಕಾರಾತ್ಮಕವಾದ ಪರಿಣಾಮ ಬೀರುತ್ತಿದೆ. ಆದ್ದರಿಂದ ನಾವೂ ಅವರಂತೆ ಮಾತನಾಡಬೇಕು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.