Select Your Language

Notifications

webdunia
webdunia
webdunia
Sunday, 13 April 2025
webdunia

ಸಮಾವೇಶಕ್ಕೆ ಬಂದವರಿಗೆ ವಿಚಿತ್ರ ಸವಾಲು ಕೊಟ್ಟ ಅಮಿತ್ ಶಾ

ಅಮಿತ್ ಶಾ
ಹೆಬ್ಬಳ್ಳಿ , ಶುಕ್ರವಾರ, 13 ಏಪ್ರಿಲ್ 2018 (09:09 IST)
ಹೆಬ್ಬಳ್ಳಿ: ಧಾರವಾಡದ ಹೆಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಮಿತ್ ಶಾ ಸಮಾವೇಶದಲ್ಲಿದ್ದವರಿಗೆ ವಿಚಿತ್ರ ಸವಾಲು ಹಾಕಿದರು.

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು ಕೇಂದ್ರ ರಾಜ್ಯಕ್ಕೆ ಕೊಟ್ಟಿರುವ 111 ಯೋಜನೆಯ ಹೆಸರು ಕೂಗಿ ಹೇಳುತ್ತೇನೆ. ಸಾಕೆಂದಾಗ ಚಪ್ಪಾಳೆ ತಟ್ಟಿ, ನಿಲ್ಲಿಸುತ್ತೇನೆ ಎಂದರು. ಅದರಂತೆ ಅವರು 12 ನೇ ಯೋಜನೆ ಹೆಸರು ಹೇಳುತ್ತಿದ್ದಂತೆ ಸಮಾವೇಶದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಚಪ್ಪಾಳೆ ತಟ್ಟಿದರು.

ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ರಾಹುಲ್ ಬಾಬಾ ಎಂದು ಲೇವಡಿ ಮಾಡಿದ ಅಮಿತ್ ಶಾ ಸಿಎಂ ಸಿದ್ದರಾಮಯ್ಯರನ್ನೂ ಲೇವಡಿ ಮಾಡದೇ ಬಿಡಲಿಲ್ಲ. ಸಿದ್ದರಾಮಯ್ಯ ಈಗ ಸ್ವಲ್ಪ ನಿದ್ರೆಯಿಂದ ಎಚ್ಚರಗೊಂಡಿದ್ದಾರೆ ಎಂದು ಅವರು ಕಾಲೆಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸಿಎಂ ಸಿದ್ದರಾಮಯ್ಯ -ಬಿಎಸ್ ವೈ ಟ್ವಿಟರ್ ವಾರ್