Select Your Language

Notifications

webdunia
webdunia
webdunia
webdunia

ತಾವು ಹೋದಲ್ಲೆಲ್ಲಾ ಗೋ ಮೂತ್ರ ಸಿಂಪಡಿಸುವ ಬಿಜೆಪಿ ವಿರುದ್ಧ ಪ್ರಕಾಶ್ ರೈ ಕಿಡಿ

ತಾವು ಹೋದಲ್ಲೆಲ್ಲಾ ಗೋ ಮೂತ್ರ ಸಿಂಪಡಿಸುವ ಬಿಜೆಪಿ ವಿರುದ್ಧ ಪ್ರಕಾಶ್ ರೈ ಕಿಡಿ
ಬೆಂಗಳೂರು , ಶುಕ್ರವಾರ, 13 ಏಪ್ರಿಲ್ 2018 (09:01 IST)
ಬೆಂಗಳೂರು: ಇತ್ತೀಚೆಗೆ ಬಿಜೆಪಿ ನಾಯಕರ ಮೇಲೆ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸುವ ಬಹುಭಾಷಾ ತಾರೆ ಪ್ರಕಾಶ್ ರೈ ತಾವು ಬಂದು ಹೋದ ವೇದಿಕೆಗೆಲ್ಲಾ ಗೋಮೂತ್ರ ಸಿಂಪಡಿಸುವುದಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ವಿರುದ್ಧ ಕಿಡಿ ಕಾರಿದ್ದಾರೆ.

ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ವಿರುದ್ಧ ಆಗಾಗ ವಾಗ್ದಾಳಿ ನಡೆಸುವ ಪ್ರಕಾಶ್ ರೈ ಇದೀಗ ಮತ್ತೊಮ್ಮೆ ಛಾಟಿ ಬೀಸಿದ್ದಾರೆ. ಅನಂತ ಕುಮಾರ್ ಹೆಗ್ಡೆಗೆ ಧೈರ್ಯವಿದ್ದರೆ ಎದುರು ನಿಂತು ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

ತಾವು ಹೋದಲ್ಲೆಲ್ಲಾ ಗೋ ಮೂತ್ರ ಸಿಂಪಡಿಸಿ ವೇದಿಕೆ ಶುದ್ಧೀಕರಿಸುವ ಸಚಿವರ ಬೆಂಬಲಿಗರ ವಿರುದ್ಧ ಕಿಡಿ ಕಾರಿದ ಪ್ರಕಾಶ್ ರೈ ‘ಅನಂತ ಕುಮಾರ್ ಹೆಗ್ಡೆ ಬೇಕಾದರೆ ಗೋ ಮೂತ್ರದಿಂದಲೇ ಸ್ನಾನ ಮಾಡಿಕೊಳ್ಳಲಿ. ಎದುರು ಬಂದು ಮಾತನಾಡುವ ಬದಲು ಇಂತಹ ಕೆಲಸ ಮಾಡುವುದೇಕೆ?’ ಎಂದು ಆಕ್ರೋಶದಿಂದಲೇ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಸರ್ಕಾರ ಬಂದರೆ ಶಾಸಕ ವಿನಯ್ ಕುಲಕರ್ಣಿ ಬಂಧನ ಶತಸ್ಸಿದ್ದ: ಬಿಎಸ್ ಯಡಿಯೂರಪ್ಪ