Webdunia - Bharat's app for daily news and videos

Install App

ಅಂಬಿ ತವರಲ್ಲಿ ಅಭಿಮಾನಿಗಳು ಫುಲ್ ಖುಷ್

Webdunia
ಗುರುವಾರ, 27 ಸೆಪ್ಟಂಬರ್ 2018 (15:00 IST)
14 ವರ್ಷಗಳ ಬಳಿಕ ರೆಬೆಲ್ ಸ್ಟಾರ್ ಅಂಬರೀಷ್ ಪರಿಪೂರ್ಣ ನಾಯಕನಾಗಿ "ಅಂಬಿ ನಿಂಗ್ ವಯಸ್ಸಾಯ್ತೋ" ಚಿತ್ರ ಮೂಲಕ ಬೆಳ್ಳಿ ತೆರೆಮೇಲೆ‌ ಕಾಣಿಸಿಕೊಳ್ತಿರೋದಕ್ಕೆ ಅಭಿಮಾನಿಗಳ ಹರ್ಷೋಧ್ಘಾರ ಮುಗಿಲು ಮಟ್ಟಿತ್ತು.

ಅಂಬರೀಷ್ ತವರೂರು ಮಂಡ್ಯದಲ್ಲಿ ಅಂಬಿ, ಅಭಿಮಾನಿಗಳು ಸಂಭ್ರಮ ಸಡಗರದಲ್ಲಿ ತೆಲಾಡಿದರು. ಮಂಡ್ಯ ನಗರದ ಸಿಲ್ವರ್ ಜೂಬಿಲಿ ಪಾರ್ಕ್ ನಿಂದ ಸಿಧ್ದಾರ್ಥ ಚಿತ್ರ ಮಂದಿರವರೆಗೆ ವಿವಿಧ ಕಲಾತಂಡಗಳು ಹಾಗೂ ನೂರಾರು ಆಟೋಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದ ಅಭಿಮಾನಿಗಳು, ಸಿದ್ದಾರ್ಥ ಚಿತ್ರ ಮಂದಿರದ ಬಳಿ ಅಂಬಿ ಭಾವಚಿತ್ರ ಹಿಡಿದು ರೆಬೆಲ್ ಸ್ಟಾರ್ ಗೆ ಜೈಕಾರ ಹಾಕಿದರು. ಈ ವೇಳೆ ಅಂಬಿ ಅಭಿಮಾನಿಗಳು ಆಯೋಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾನು ಅಂಬರೀಷ್ ಅವ್ರ ಪಕ್ಕಾ ಅಭಿಮಾನಿ ಹಾಗಾಗಿ ಅಂಬಿ ಅವ್ರ ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅಂಬರೀಷ್ ಅವ್ರನ್ನ ನೋಡ್ತಿದ್ರೆ ಇನ್ನೂ ವಯಸ್ಸಾದಂತೆ ಕಾಣ್ತಿಲ್ಲ‌ ಎಂದರು. ಹಲವು ವರ್ಷಗಳ ನಂತ್ರ ಪರಿಪೂರ್ಣ ನಾಯಕನಟನಾಗಿ ರೆಬಲ್ ಸ್ಟಾರ್ ಅಂಬರೀಶ್ ರನ್ನು ತೆರೆಯ ಮೇಲೆ ಕಂಡ ಅಭಿಮಾನಿಗಳು ಫುಲ್‌ಖುಷ್ ಆಗಿದ್ದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿ ಕಾರ್ಪೊರೇಟರ್ ಬಂಧನ, ಪಕ್ಷದಿಂದ ಅಮಾನತು

ತಮಿಳುನಾಡಿನ ಚೋಳರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: 140 ಕೋಟಿ ಭಾರತೀಯರ ಕಲ್ಯಾಣಕ್ಕೆ ಪ್ರಾರ್ಥನೆ

ಹರಿದ್ವಾರ ಕಾಲ್ತುಳಿತ, ಇದು ಅಪಘಾತವಲ್ಲ, ಆಡಳಿತ ವ್ಯವಸ್ಥೆಯ ವೈಫಲ್ಯ: ಕೇಜ್ರಿವಾಲ್

ರಾಜ್ಯದಲ್ಲಿ ರಸಗೊಬ್ಬರದ ಕಾಳದಂಧೆ: ಸರ್ಕಾರದ ವಿರುದ್ಧ ಜು.28ರಂದು ಪ್ರತಿಭಟನೆ, ವಿಜಯೇಂದ್ರ

ಎಚ್ಚರಿಕೆ ಬಳಿಕವು ನಿಷೇಧಿತ ಬಣ್ಣ ಬಳಕೆ: 6 ಎಂಫೈರ್ ಹೊಟೇಲ್ ವಿರುದ್ಧ ಕ್ರಮಕ್ಕೆ ಚಿಂತನೆ

ಮುಂದಿನ ಸುದ್ದಿ
Show comments