Select Your Language

Notifications

webdunia
webdunia
webdunia
webdunia

ನಳಿನ್ ಕುಮಾರ್ ಕಟೀಲ್ ವಿರುದ್ಧ ತಿರುಗಿ ಬಿದ್ದ ಕೈ ಪಡೆ

ನಳಿನ್ ಕುಮಾರ್ ಕಟೀಲ್ ವಿರುದ್ಧ ತಿರುಗಿ ಬಿದ್ದ ಕೈ ಪಡೆ
ಮಂಗಳೂರು , ಶನಿವಾರ, 18 ಮೇ 2019 (14:58 IST)
ಮಹಾತ್ಮಾ ಗಾಂಧೀಜಿಯವರ ಹತ್ಯೆಯನ್ನು ಸಮರ್ಥಿಸಿ ಹಾಗೂ  ಕೊಲೆಗಾರ ನಾಥೋರಾಮ್ ಗೋಡ್ಸೆಯನ್ನು ಒಲೈಸುವ ರೀತಿಯ ಟ್ವೀಟ್ ಮಾಡಿದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರುಗಡೆ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ,  ನಳಿನ್ ಕುಮಾರ್ ಹೇಳಿಕೆ ದೇಶದ್ರೋಹಕ್ಕೆ ಸಮಾನವಾದ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಮೇಲೆ ಗೌರವ ವಿಲ್ಲದ ನಳಿನ್ ಕುಮಾರ್ ನಂತವರು ಮಾತ್ರ ಈ ರೀತಿಯಾಗಿ ಕೀಳು ಮಟ್ಟದ ಹೇಳಿಕೆ ನೀಡಲು ಸಾಧ್ಯ. 

ಗಾಂಧೀಜಿವರನ್ನು, ಗಾಂಧೀಜಿಯವರ ಮೌಲ್ಯ,  ಸಂದೇಶವನ್ನು ಇಡೀ ಜಗತ್ತೇ ಒಪ್ಪಿಕೊಂಡು ಅನುಸರಿಸುತ್ತಿರುವಾಗ ನಳಿನ್ ಕುಮಾರ್ ಅವರು ತನ್ನ ಸಣ್ಣತನವನ್ನು ತೋರಿಸಿ ಜನರೆದುರು ಅಪಹಾಸ್ಯಕ್ಕೀಡಾಗಿದ್ದಾರೆ ಎಂದು ರಮಾನಾಥ ರೈ ಟೀಕಿಸಿದರು.
ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮಾತನಾಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್. ವಿಶ್ವನಾಥ್ ಗೆ ಕೃಷ್ಣಭೈರೇಗೌಡ ಟಾಂಗ್