Publish Date: Sun, 24 Feb 2019 (15:06 IST)
Updated Date: Sun, 24 Feb 2019 (15:09 IST)
ರಾಜಧಾನಿಯಲ್ಲಿ ನಡೆದ ದೇಶದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2019ಗೆ ತೆರೆ ಎಳೆಯಲಾಯಿತು.
ವಿಮಾನಗಳ ಡಿಕ್ಕಿ, ಪೈಲಟ್ ಸಾವು, ಪಾರ್ಕಿಂಗ್ ಸ್ಥಳದಲ್ಲಿ ಆದ ಅಗ್ನಿ ದುರಂತದಿಂದ ಕಾರುಗಳು ಬೆಂಕಿಯಿಂದ ನಾಮಾವಶೇಷವಾದ ಘಟನೆ ನಡುವೆಯೇ ನಡೆದ ವೈಮಾನಿಕ ಶೋ ಅಂತ್ಯಕಂಡಿತು.
ಕಹಿ ಘಟನೆಗಳ ನಡುವೆಯೇ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಆಕರ್ಷಕ ಕಸರತ್ತು ಗಮನ ಸೆಳೆಯಿತು.
ಕಳೆದ 20 ರಂದು ಆರಂಭವಾದ 5 ದಿನಗಳ ಈ ಏರ್ ಶೋ ಇಷ್ಟೆಲ್ಲಾ ಅವಘಡ, ದುಃಖ ದುಮ್ಮಾನ, ನೋವುಗಳ ನಡುವೆಯೇ ಸಮಾಪ್ತಿಯಾಯಿತು.