Select Your Language

Notifications

webdunia
webdunia
webdunia
webdunia

ನಟ ಉಪೇಂದ್ರ ನೀಡಿದ್ರು ಬಿಗ್ ಶಾಕ್!

ನಟ ಉಪೇಂದ್ರ ನೀಡಿದ್ರು ಬಿಗ್ ಶಾಕ್!
ದಾವಣಗೆರೆ , ಭಾನುವಾರ, 3 ಫೆಬ್ರವರಿ 2019 (21:33 IST)
ನಟ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.
ಪ್ರಜಾಕೀಯದಿಂದ ಗೆದ್ದರೆ ಸಿನಿಮಾ ರಂಗ ಬಿಡುತ್ತೇನೆ ಎಂದು ಅಭಿಮಾನಿಗಳಿಗೆ ನಟ ಉಪೇಂದ್ರ ಶಾಕ್ ನೀಡಿದ್ದಾರೆ.

ದಾವಣಗೆರೆ ನಗರದ ಜಿಲ್ಲಾ ವರದಿಗಾರ ಕೂಟದಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದಿಂದ 28 ಲೋಕ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ನಾನು ಯಾವೂದಾದರು ಚುನಾವಣೆಯಲ್ಲಿ ಗೆದ್ದರೆ ಸಿನಿಮಾ‌ ಮಾಡುವುದು ನಿಲ್ಲಿಸುತ್ತೇನೆ. ಗೆದ್ದ ಬಳಿಕ ನಾನು‌ ಇಲ್ಲಿ ಕಾರ್ಮಿಕನಾಗುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ. ರಾಜ್ಯಕ್ಕೆ ಬಲಿಷ್ಠ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಇದೇ ವಿಚಾರ ಇಟ್ಟುಕೊಂಡು ನನ್ನ ಹೋರಾಟ ನಡೆದಿದೆ. ನನ್ನದು ವಿಧಾನ ಸಭೆಗೆ ಸ್ಪರ್ಧಿಸುವ ಇಚ್ಛೆ ಇತ್ತು ಆದರೆ ಆಗಲಿಲ್ಲ.

  ಲೋಕ ಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಸ್ಪರ್ಧೆ ಮಾಡುವ ಸಂದರ್ಭ ಬಂದರೆ ಸ್ಪರ್ಧಿಸುವೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವೆ ಎಂದು ಹೇಳಿದರು‌. ಇನ್ನೂ ಗೆಲುವು ಹುಡುಕುತ್ತಾ ಹೋಗಲ್ಲ, ಕೆಲಸ ಮಾಡುತ್ತೇನೆ. ಫಲ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ದಾವಣಗೆರೆಯಲ್ಲಿ ಪ್ರಜಾಕೀಯ ಪಕ್ಷ ಕುರಿತು ಉಪೇಂದ್ರ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಎಂದು ಗೊತ್ತಾ?