Webdunia - Bharat's app for daily news and videos

Install App

ಅಕ್ರಮ ಹೋಂಸ್ಟೇಗಳ ವಿರುದ್ಧ ಛಾಟಿ ಬೀಸಲು ರೆಡಿಯಾದ ಸಚಿವ

ಸಾ.ರಾ. ಮಹೇಶ್
Webdunia
ಶನಿವಾರ, 4 ಆಗಸ್ಟ್ 2018 (14:03 IST)
ಕೊಡಗು ಜಿಲ್ಲೆಯಲ್ಲಿ ಅಕ್ರಮ ಹೋಂ ಸ್ಟೇಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.

ಹೋಂ ಸ್ಟೇಗಳ ನೋಂದಾವಣೆಗೆ ಅವರು ಈ ಮೊದಲು ಆಗಸ್ಟ್ 2ರ ಗಡುವು ನೀಡಿದ್ದರು. ಆದರೆ ಬಹುತೇಕ ಹೋಂ ಸ್ಟೇಗಳು ಸಚಿವರು ನೀಡಿರುವ ಗಡುವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಈ ಹೋಂ ಸ್ಟೇಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಮೂಲಕ ಜಂಟಿ ಕಾರ್ಯಾಚರಣೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಅವರು ಇದೇ ಮೊದಲ ಬಾರಿಗೆ ಮಡಿಕೇರಿಗೆ ಭೇಟಿ ನೀಡಿದ ಹಿನ್ನಲೆ ಕುಶಾಲನಗರದ ಹಾಗೂ ಮಡಿಕೇರಿ ಮುಖ್ಯ ದ್ವಾರದ ಬಳಿ ಇರುವ ಕಾವೇರಿ ಪ್ರತಿಮೆಗೆ ಹೂವಿನ ಮಾಲಾರ್ಪಣೆ ಮಾಡಿದರು. ಮಡಿಕೇರಿಗೆ ಆಗಮಿಸಿದ ಸಚಿವ ಸಾ.ರಾ.ಮಹೇಶ್ ಅವರು ವೀರ ಸೇನಾನಿಗಳ ಪ್ರತಿಮೆಗೆ ಮಲಾರ್ಪಣೆ  ನೆರವೇರಿಸಿದರು. ಬಳಿಕ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ತಮ್ಮ ಹೊಸ ಕಚೇರಿ ಉದ್ಘಾಟಿಸಿದರು.

ಇನ್ನುಮುಂದೆ ತಿಂಗಳ ಪ್ರತಿ ಎರಡನೇ ಶುಕ್ರವಾರ ತಾವು ಮಡಿಕೇರಿ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರುವುದಾಗಿ  ತಿಳಿಸಿದರು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು. 



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DGP Om Prakash murder: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಮರ್ಡರ್: ಪತ್ನಿ ಪಲ್ಲವಿ ಅರೆಸ್ಟ್

Gold Price today: ಚಿನ್ನದ ಬೆಲೆ ಇಂದು ಇನ್ನೂ ಎತ್ತರ ಇನ್ನೂ ಹತ್ತಿರ

Jammu Kashmir cloud burst: ಮೇಘಸ್ಪೋಟಕ್ಕೆ ಹರಿದು ಬಂತು ಕಟ್ಟಡಗಳು, ವಾಹನಗಳು: ವಿಡಿಯೋ

DGP Om Prakash Rao ಹತ್ಯೆಯಾಗಿದ್ದು ಹೇಗೆ, ಪತ್ನಿ ಪಲ್ಲವಿ ಹೇಳಿದ್ದು ಕೇಳಿದರೆ ಬೆಚ್ಚಿ ಬೀಳ್ತೀರಿ

DK Shivakumar: ಡಿಕೆ ಶಿವಕುಮಾರ್ ಟೆಂಪಲ್ ರನ್ ಹಿಂದಿದೆ ಭಾರೀ ಲೆಕ್ಕಾಚಾರ: ಬಿಜೆಪಿಗೆ ಗಡ ಗಡ

ಮುಂದಿನ ಸುದ್ದಿ
Show comments