Webdunia - Bharat's app for daily news and videos

Install App

ಬಂಧನ ಭೀತಿಯಲ್ಲಿ ಆತ್ಮಹತ್ಯೆ ಗೆ ಯತ್ನಿಸಿ ಆಸ್ಪತ್ರೆ ಸೇರಿದ ಆರೋಪಿ

Webdunia
ಬುಧವಾರ, 1 ಮಾರ್ಚ್ 2023 (19:08 IST)
ನಗರದ ಚಂದ್ರ ಲೇಔಟ್ ನಡೆದಿದ್ದ ಲಿಖಾಯತ್ ಖಾನ್ ಕೊಲೆ ಪ್ರಕರಣದಲ್ಲಿ ಆರೋಪಿ ಯಾರು ಅಂತ ಗೊತ್ತಾದ್ರು ಪೊಲೀಸ್ರು ಆರೋಪಿಯನ್ನ ಬಂಧಿಸಲು ಸಾಧ್ಯವಾಗ್ತಿಲ್ಲ. ಕಾರಣ ಅಂದ್ರೆ ಆರೋಪಿ ಥೈರಾಯ್ಡ್ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆ ಗೆ ಯತ್ನಸಿ ಆಸ್ಪತ್ರೆ ಸೇರಿದ್ದಾನೆ. ಇನ್ನೂ ಈ ಪ್ರಕರಣ ಆರೋಪಿ  ಕೊಲೆಯಾದ ಲಿಖಾಯತ್ ಖಾನ್ ಖಾಸ ಪರಿಚಯಸ್ಥನಾಗಿದ್ದ ಇಕಿಯಾಸ್ ಖಾನ್ 25 ವರ್ಷದ ಇಲಿಯಾಸ್ ಲಿಖಾಯತ್ ಗೆ ಸ್ವಂತ ತಮ್ಮನಂತಿದ್ದ. ಆತನ ಕುಟುಂಬಕ್ಕು ಸಾಕಷ್ಟು ಹತ್ತಿರವಾಗಿದ್ದ. ಆದ್ರೆ ಕೊಲೆ ಮಾಡಲು ಕಾರಣ ಏನೂ ಅನ್ನೋದು ಇನ್ನೂ ಪೊಲೀಸ್ರಿಗೆ ಕನ್ಫರ್ಮ್ ಆಗಿಲ್ಲ. ಆದ್ರೆ ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ಕತ್ತರಿ ಮೇಲಿನ ಫ್ರಿಂಗರ್ ಪ್ರಿಂಟ್ ಹಾಗೂ ಇಲಿಯಾಸ್ ಫ್ರಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ‌.
 
ಚಂದ್ರಲೇಔಟ್ ಪೊಲೀಸ್ರು ಇನ್ನೇನು ಆರೋಪಿಯನ್ನ ರೀಚ್ ಆಗಿ ಬಂಧಿಸಬೇಕು ಅನ್ನೊ ಅಷ್ಟರಲ್ಲಿ ಆರೋಪಿ ಆಸ್ಪತ್ರೆ ಸೇರಿದ್ದಾನೆ. ಥೈರಾಯ್ಡ್ ಮಾತ್ರೆಗಳನ್ನ ನುಂಗಿ ಆತ್ಮಹತ್ಯೆ ಗೆ ಯತ್ನಿಸಿ ಆಸ್ಪತ್ರೆ ಗೆ ದಾಖಲಾಗಿದ್ದಾನೆ.
 
ಇನ್ನೂ ಈ ಘಟನೆ ಸಂಬಂಧ ಜೆಜೆ ಆರ್ ನಗರ ಠಾಣೆಯಲ್ಲಿ ಐಪಿಸಿ 309 (ಆತ್ಮಹತ್ಯೆ ಯತ್ನ ಪ್ರಕರಣ) ದಾಖಲಾಗಿದೆ. ಇತ್ತ ಕೊಲೆಯಾದ ಲಿಖಾಯತ್ ತಾನು ಸಾಯುವ ಹಿಂದಿನ ದಿನ ಮನೆಯವರ ವಿರೋಧದ ನಡುವೆ ಎರಡನೇ ಮದುವೆಯಾಗಿದ್ನಂತೆ. ಕೊಲೆಗೆ ಇದೇ ಕಾರಣಾನ ಅಥವಾ ಬೇರೆ ಕಾರಣ ಇದ್ಯ ಅನ್ನೊದು ಇಲಿಯಾಸ್ ಖಾನ್ ಪೊಲೀಸ್ರ ವಶಕ್ಕೆ ಸಿಕ್ಕ ಮೇಲೆ ಗೊತ್ತಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments