Select Your Language

Notifications

webdunia
webdunia
webdunia
webdunia

ಪ್ರೀತಿ ನಿರಾಕರಿಸಿದ ಯುವತಿಯನ್ನು ಅಪಹರಿಸಿ ಬಲವಂತವಾಗಿ ತಾಳಿ ಕಟ್ಟಿದ ಯುವಕ

ಹಾಸನ
ಹಾಸನ , ಬುಧವಾರ, 5 ಫೆಬ್ರವರಿ 2020 (10:45 IST)
ಹಾಸನ : ಪ್ರೀತಿ ನಿರಾಕರಿಸಿದ  ಯುವತಿಯೊಬ್ಬಳನ್ನು ಯುವಕನೊಬ್ಬ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿಯೇ ತಾಳಿ ಕಟ್ಟಿದ ಘಟನೆ ಹಾಸನದಲ್ಲಿ ನಡೆದಿದೆ.


ಮನು ಇಂತಹ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತ ಯುವತಿಯ ಅತ್ತೆಯ ಮಗ ಎಂಬುದಾಗಿ ತಿಳಿದುಬಂದಿದೆ. ಮನು ಯುವತಿಯನ್ನು ಪ್ರೀತಿಸುತ್ತಿದ್ದು, ಇದನ್ನು ಯುವತಿ ವಿರೋಧಿಸಿದ್ದಳು. ಆದಕಾರಣ ಯುವತಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಸ್ನೇಹಿತರ ಸಹಾಯದಿಂದ  ಆಕೆಯನ್ನು ಅಪಹರಿಸಿ ಕಾರಿನಲ್ಲಿಯೇ ಬಲವಂತವಾಗಿ ತಾಳಿ ಕಟ್ಟಿದ್ದಾನೆ.


ಘಟನೆಯ ಬಳಿಕ ಆರೋಪಿ ಹಾಗೂ ಯುವತಿ ನಾಪತ್ತೆಯಾಗಿದ್ದು, ಈ ಬಗ್ಗೆ ಯುವತಿಯ ಪೋಷಕರು ದುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿಗೆ ನೀಡಿದ್ದ ಸವಲತ್ತು ನನಗೂ ನೀಡಿ- ರಮೇಶ್ ಜಾರಕಿಹೊಳಿ ಬೇಡಿಕೆ