Select Your Language

Notifications

webdunia
webdunia
webdunia
webdunia

ಸೆಲ್ಫಿ ಹುಚ್ಚಾಟಕ್ಕೆ ಆನೆ ದಾಳಿಯಿಂದ ಜಸ್ಟ್ ಎಸ್ಕೇಪ್ ಆದ ಪ್ರವಾಸಿಗನಿಗೆ ಬಿತ್ತು ಭಾರೀ ದಂಡ

ಬಂಡೀಪುರ ಆನೆ ದಾಳಿ

Sampriya

ಚಾಮರಾಜನಗರ , ಮಂಗಳವಾರ, 12 ಆಗಸ್ಟ್ 2025 (18:02 IST)
Photo Credit X
ಚಾಮರಾಜನಗರ: ಬಂಡೀಪುರದಲ್ಲಿ ಕಾಡಾನೆ ಎದುರು ಸೆಲ್ಫಿ  ತೆಗೆಯಲು ಹೋಗಿ ದಾಳಿಗೊಳಗಾದ ವ್ಯಕ್ತಿಗೆ ನಂಜನಗೂಡಿನ ಅರಣ್ಯ ಇಲಾಖೆ 25 ಸಾವಿರ ರೂ ದಂಡ ವಿಧಿಸಿದ್ದಾರೆ. 

ಆನೆ ಎದುರು ಹುಚ್ಚಾಟ ಮೆರೆಯಲು ಹೋಗಿ, ದಾಳಿಗೊಳಗಾದ ಪ್ರವಾಸಿಗನ ವಿಡಿಯೋ ಭಾರೀ ವೈರಲ್ ಆಗಿತ್ತು.  

ಆರಂಭದಲ್ಲಿ ಅರಣ್ಯಾಧಿಕಾರಿಗಳು ಕೇರಳದ ವ್ಯಕ್ತಿ ಎಂದು ನಂಬಿದ್ದರು ಮತ್ತು ಅದರಂತೆ ಹುಡುಕಾಟ ನಡೆಸಿದರು. ನಂತರ ಆತ ನಂಜನಗೂಡಿನ ಬಸವರಾಜು ಎಂದು ತಿಳಿದುಬಂದಿದೆ. ಘಟನೆಯ ನಂತರ ಆತ ಅರಣ್ಯ ಇಲಾಖೆ  ಕೇರಳಕ್ಕೆ ಪ್ರಯಾಣಿಸಿದರು
ಮತ್ತು ಕರ್ನಾಟಕಕ್ಕೆ ಹಿಂತಿರುಗಿದರು, ಪತ್ತೆ ತಪ್ಪಿಸಲು ಫೋನ್ ಸ್ವಿಚ್ ಆಫ್ ಮಾಡುತ್ತಿದ್ದರು. ಅಧಿಕಾರಿಗಳು ಅಂತಿಮವಾಗಿ ಆತನನ್ನು ಪತ್ತೆಹಚ್ಚಿ ದಂಡ ವಿಧಿಸಿದರು.

ಬಂಕಾಪುರದ ದೇವಸ್ಥಾನಕ್ಕೆ ಹೋಗಿದ್ದೆ, ವಾಪಸ್ ಬರುವಾಗ ಮೋಜು ಮಸ್ತಿಗೆ ಸೆಲ್ಫಿ, ಫೋಟೊ ತೆಗೆಸಿಕೊಳ್ಳಲು ನಿಂತಿದ್ದ ನನ್ನ ಮೇಲೆ ಕಾಡಾನೆಯೊಂದು ದಾಳಿ ಮಾಡಿತು.

ಇನ್ನು ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬಾರದು, ಸೆಲ್ಫಿ ತೆಗೆಯಬಾರದು ಎಂದು ಬಂಡೀಪುರ ಅರಣ್ಯಾಧಿಕಾರಿ ಬಸವರಾಜು ಅವರು ಸಾರ್ವಜನಿಕ ಜಾಗೃತಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿ ನಾಯಿ ಪರ ಟ್ವೀಟ್ ಮಾಡಿದ ಸಿದ್ದರಾಮಯ್ಯ: ಇದಕ್ಕೇನಾ ಬಿರಿಯಾನಿ ಕೊಡ್ತಿರೋದು ಎಂದ ನೆಟ್ಟಿಗರು