Publish Date: Tue, 27 Dec 2022 (17:01 IST)
Updated Date: Tue, 27 Dec 2022 (17:09 IST)
ಸಾಲದಶೂಲಕ್ಕೆ ಅನ್ನದಾತರು ಬಲಿಯಾಗ್ತಾನೆ ಇದ್ದಾರೆ.. ಸರ್ಕಾರಗಳು ಎಷ್ಟೇ ಅರಿವು ಮೂಡಿಸಿದ್ರೂ ನಿಯಂತ್ರಣವಾಗ್ತಿಲ್ಲ. ಸಾಲಬಾಧೆ ತಾಳಲಾರದೆ ಮತ್ತೋರ್ವ ರೈತ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಸಣ್ಣಪ್ಪ ಮೃತ ದುರ್ದೈವಿಯಾಗಿದ್ದು, 20 ಗುಂಟೆ ಜಮೀನು ಹೊಂದಿದ್ದ.. ಆದ್ರೆ, ಸಣ್ಣಪ್ಪ ಬೆಳೆದ ಬೆಳೆಗಳಿಗೆ ಬೆಲೆ ಸಿಕ್ಕಿಲ್ಲ. ಇದರಿಂದ ಸಾಲ ತೀರಿಸಲಾಗದೆ ಮನ ನೊಂದಿದ್ದ ರೈತ ಸಾಲಬಾಧೆಯಿಂದ ಮನನೊಂದು
ಕೆಂಪಿಸಿದ್ದನಹುಂಡಿ ಗ್ರಾಮದ ಸಮೀಪವಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.