Select Your Language

Notifications

webdunia
webdunia
webdunia
webdunia

500 ಕಿ.ಮೀ ಏಕಾಂಗಿಯಾಗಿ ಪಾದಯಾತ್ರೆ ಕೈಗೊಂಡ ಭಕ್ತ

500 ಕಿ.ಮೀ ಏಕಾಂಗಿಯಾಗಿ ಪಾದಯಾತ್ರೆ ಕೈಗೊಂಡ ಭಕ್ತ
ಬಳ್ಳಾರಿ , ಸೋಮವಾರ, 8 ಜುಲೈ 2019 (18:42 IST)
ದೇವರ ದರುಶನಕ್ಕಾಗಿ ಭಕ್ತರೊಬ್ಬರು ಏಕಾಂಗಿಯಾಗಿ 500 ಕಿಲೋ ಮೀಟರ್ ಯಾತ್ರೆ ಕೈಗೊಂಡಿದ್ದಾರೆ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಿ.ಪ್ರಹ್ಲಾದಶೆಟ್ರು ರವರು ಕೂಡ್ಲಿಗಿ ಯಿಂದ ಸುಮಾರು 470ಕಿಮೀ ದೂರವಿರುವ ಶ್ರೀ ಕ್ಷೇತ್ರ ಪಂಡರಾಪುರ ವಿಠಲ ದೇವರ ದರುಶನಕ್ಕಾಗಿ ಪಾದಯಾತ್ರೆ ತೆರಳುತ್ತಿದ್ದಾರೆ.

ದೇವರ ಧ್ಯಾನದೊಂದಿಗೆ ಜಪದೊಂದಿಗೆ ಏಕಾಂಗಿಯಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಬಳಲಿಕೆಯಾದಾಗ ಕೆಲಕ್ಷಣಗಳು ತಂಗಿ ಮತ್ತೆ ಪಾದಯಾತ್ರೆ ಮುಂದುವರೆಸುವ ಇವರು 1987ರಿಂದ ಪ್ರತಿವಷ೯ದಲ್ಲಿ 2-3 ಬಾರಿಯಂತೆ ಸತತ ಪಾದಯಾತ್ರೆ ಮಾಡುತ್ತಿದ್ದಾರೆ ಪ್ರಹ್ಲಾದ ಶೆಟ್ರು.

ಇವರ ಆಧ್ಯಾತ್ಮ ಸಾಧನೆ ಅಪಾರವಿದ್ದು ಎಲೆಮರೆಯ ಕಾಯಿಯಂತಿದ್ದಾರೆ. ಕಳೆದ 30 ವಷ೯ಗಳಿಂದ 50 ಬಾರಿ ಏಕಾಂಗಿ ಪಾದಯಾತ್ರೆ ಸೇವೆಗೈದಿದ್ದಾರೆ. ಅವರ ಈ ಸಾಧನೆಗೆ ಕುಟುಂಬ ವರ್ಗ ಹಾಗೂ ಪಾದಯಾತ್ರೆಯ ಹಾದಿಯಲ್ಲಿ ದೊರಕುವ ಭಕ್ತಾದಿಗಳ ಪ್ರೋತ್ಸಾಹದ ನುಡಿಗಳು, ಸಹಕಾರವೇ ಕಾರಣವಂತೆ. ಜಗತ್ತಿನ ಕಲ್ಯಾಣಕ್ಕಾಗಿ, ಶಾಂತಿ ಸಮಾಜಕ್ಕಾಗಿ  ಯಾತ್ರೆ ಎನ್ನುತ್ತಾರೆ ಅವರು.




Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರಿಗೆ ಇದು ಇರಲೇಬೇಕಂತೆ: ಹೀಗಂದೋರು ಯಾರು?