Select Your Language

Notifications

webdunia
webdunia
webdunia
webdunia

ಚಾನೆಲ್ ವರದಿಗಾರನ ತಲೆಗೆ ಕೊಡಲಿ ಏಟು ಹಾಕಿದ ಕಿರಾತಕ

ಚಾನೆಲ್ ವರದಿಗಾರನ ತಲೆಗೆ ಕೊಡಲಿ ಏಟು ಹಾಕಿದ ಕಿರಾತಕ
ಬೆಳಗಾವಿ , ಮಂಗಳವಾರ, 18 ಜೂನ್ 2019 (16:13 IST)
ಖಾಸಗಿ ಚಾನಲ್ ವರದಿಗಾರನ ಮೇಲೆ ವ್ಯಕ್ತಿಯೊಬ್ಬನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.

ಬೆಳಗಾವಿಯ ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ  ತಡ ರಾತ್ರಿಯಲ್ಲಿ ನಡೆದ ಘಟನೆ ಇದಾಗಿದೆ. ಬಸವರಾಜು ಪಾಟೀಲ ಹಲ್ಲೆಗೊಳಗಾದ ಪರ್ತಕರ್ತನಾಗಿದ್ದಾನೆ.

ಪರ್ತಕರ್ತನ ಮನೆಗೆ ಬಂದು ಏಕಾಏಕಿ ಕೊಡಲಿಯಿಂದ ದಾಳಿ ನಡೆಸಿ ವ್ಯಕ್ತಿ ಪರಾರಿಯಾಗಿದ್ದಾನೆ. ಊರಲ್ಲಿ ಗ್ರಾಮಸ್ಥರ ಮೇಲೆ ಏಕಾಎಕಿ  ಗುಂಡಾಗಿರಿ, ಹಲ್ಲೆ ಮಾಡುತ್ತಿದ್ದ ರಾಯಪ್ಪ. ರಾಯಪ್ಪನ ಗುಂಡಾಗಿರಿ ಬಗ್ಗರ ಪೊಲೀಸರ  ಗಮನಕ್ಕೆ ತಂದಿದ್ದರು ಪತ್ರಕರ್ತ ಬಸವರಾಜ್.

ನನ್ನ ಬಗ್ಗೆ ಪೊಲೀಸರಿಗೆ ಯಾಕೆ ಹೇಳಿದ್ದಿಯಾ? ಅಂತಾ  ಮನೆಗೆ ನುಗ್ಗಿ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.

ವೀರಾಪುರ  ಗ್ರಾಮದ ರಾಯಪ್ಪ ಅಂಬಡಗಟ್ಟಿ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ಗಂಭೀರ ಗಾಯಗೊಂಡ ಪರ್ತಕರ್ತ ಬಸವರಾಜು ಅವರನ್ನು ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ತಡರಾತ್ರಿಯಲ್ಲಿ ರಾಯಪ್ಪನನ್ನು  ವಶಕ್ಕೆ ಪಡೆದು  ವಿಚಾರಣೆ ನಡೆಸುತ್ತಿದ್ದಾರೆ ಪೊಲೀಸರು. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್, ಪ್ರಜ್ವಲ್ ತೆರೆಮರೆಯಲ್ಲೇ ಇರಬೇಕು; ಯಾಕೆ?