Select Your Language

Notifications

webdunia
webdunia
webdunia
webdunia

ಗಾಯವಾಗಿದ್ದರೂ ಶಿಖರ್ ಧವನ್ ತಂಡದೊಂದಿಗೇ ಯಾಕಿದ್ದಾರೆ? ಬಹಿರಂಗಪಡಿಸಿದ ಕೊಹ್ಲಿ

ಗಾಯವಾಗಿದ್ದರೂ ಶಿಖರ್ ಧವನ್ ತಂಡದೊಂದಿಗೇ ಯಾಕಿದ್ದಾರೆ? ಬಹಿರಂಗಪಡಿಸಿದ ಕೊಹ್ಲಿ
ಲಂಡನ್ , ಶನಿವಾರ, 15 ಜೂನ್ 2019 (09:40 IST)
ಲಂಡನ್: ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಪಂದ್ಯದ ವೇಳೆ ಹೆಬ್ಬರಳಿಗೆ ಗಾಯ ಮಾಡಿಕೊಂಡು ಕ್ರಿಕೆಟ್ ನಿಂದ ಮೂರು ವಾರಗಳ ವಿಶ್ರಾಂತಿ ಪಡೆಯಲು ಸೂಚಿಸಿದ್ದರೂ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಇನ್ನೂ ತಂಡದೊಂದಿಗೇ ಯಾಕಿದ್ದಾರೆ? ಈ ಪ್ರಶ್ನೆಗೆ ನಾಯಕ ಕೊಹ್ಲಿ ಉತ್ತರಿಸಿದ್ದಾರೆ.


ಧವನ್ ರನ್ನು ಇನ್ನೂ ತಂಡದಲ್ಲಿಯೇ ಉಳಿಸಿಕೊಂಡಿರುವುದಕ್ಕೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಆ ಬಗ್ಗೆ ಇದ್ದ ಅನುಮಾನಗಳಿಗೆ ಕೊಹ್ಲಿ ಉತ್ತರ ನೀಡಿದ್ದಾರೆ.

‘ಧವನ್ ಗೆ ಆಡಬೇಕು ಎಂಬ ಆಸೆ ತುಂಬಾ ಇದೆ. ಬಹುಶಃ ಅವರ ಈ ಹತಾಶೆ, ಅಭಿಲಾಷೆಯಿಂದ ಅವರು ಬೇಗನೇ ಗುಣಮುಖರಾಗಬಹುದು. ಇದರಿಂದ ಅವರು ಸೆಮಿಫೈನಲ್ ಹಂತದ ವೇಳೆಗೆ ಆಡಲು ಸಮರ್ಥರಾಗಬಹುದು. ಅದಕ್ಕಾಗಿಯೇ ಅವರನ್ನು ಇನ್ನೂ ತಂಡದಲ್ಲಿಯೇ ಉಳಿಸಿಕೊಂಡಿದ್ದೇವೆ’ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ಈ ಇಬ್ಬರು ವೇಗಿಗಳಿಗೆ ಟೀಂ ಇಂಡಿಯಾದ ಈ ಇಬ್ಬರು ಬ್ಯಾಟ್ಸ್ ಮನ್ ಗಳೇ ಟಾರ್ಗೆಟ್!