Select Your Language

Notifications

webdunia
webdunia
webdunia
webdunia

ಹಿಟ್ ಅಂಡ್ ರನ್ ಕೇಸ್ ಪತ್ತೆ ಹಚ್ಚಿದ ಬಸವನಗುಡಿ ಸಂಚಾರ ಪೊಲೀಸರು

crime

geetha

bangalore , ಶನಿವಾರ, 17 ಫೆಬ್ರವರಿ 2024 (14:00 IST)
ಬೆಂಗಳೂರು-ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಕೇಸ್ ನ್ನ ಬಸವನಗುಡಿ ಸಂಚಾರಿ ಪೊಲೀಸರು ಪತ್ತೆಹಚ್ಚಿದ್ದಾರೆ.ಕಳೆದ 12 ತಾರೀಖು ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದ್ದು,ಅಪಘಾತ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ವೇಣು ಎಂಬಾತನ ಬಂಧನ ಮಾಡಲಾಗಿದೆ.ಬೈಕ್ ನಿಂದ ಆಟೋ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ.ಗವಿಪುರ ಎಕ್ಸ್ ಟೆನ್ಸನ್ ನ ರಸ್ತೆಯಲ್ಲಿ  ಅಪಘಾತ ನಡೆದಿತ್ತು.ಅಪಘಾತದಲ್ಲಿ ಆಟೋ ಚಾಲಕ ರಮೇಶ್ (48) ಮೃತಪಟ್ಟಿದ್ದ.ಘಟನೆಗೆ ದ್ವಿಚಕ್ರವಾಹನ ಸವಾರನ ಅತಿವೇಗ ಹಾಗೂ ಅಜಾಗರೂಕತೆಯೇ ಕಾರಣವೆಂದು ತಿಳಿದಿತ್ತು ಆದ್ರೆ ಆರೋಪಿ ವೇಣು ಅಪಘಾತದ ನಂತರ ಎಸ್ಕೇಪ್ ಆಗಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಬಸವನಗುಡಿ ಪೊಲೀಸರು ತನಿಖೆ ಕೈಗೊಂಡಿದ್ದರು ಆದ್ರೆ ಪೊಲೀಸರಿಗೆ ಆರೋಪಿಯ ಸಣ್ಣ ಸುಳಿವುಸಿಕ್ಕಿರಲಿಲ್ಲ.ಸಿಸಿಟಿವಿಯೊಂದರಲ್ಲಿ ಹಳದಿ ಬಣ್ಣದ ಟಿ ಶರ್ಟ್ ಧರಿಸಿದ್ದದ್ದು ಮಾತ್ರ ಗೊತ್ತಾಗಿತ್ತು.ಆರೋಪಿ ಬೈಕ್ ಗೆ ನಂಬರ್ ಪ್ಲೇಟ್ ಸಹ ಇರಲಿಲ್ಲಮಸುಮಾರು ಎರಡು ದಿನಗಳ ಕಾಲ ಸುಮಾರು 70 ಕ್ಕೂ ಅಧಿಕ ಸಿಸಿಟಿವಿ ಪರಿಶೀಲನೆ ಬಳಿಕ ಆರೋಪಿ ಬಂಧನ ಮಾಡಲಾಗಿದೆ.ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಇಂದಿನಿಂದ ಬಿಜೆಪಿ ರಾಷ್ಟ್ರೀಯ ಸಮಾವೇಶ