Publish Date: Wed, 14 Feb 2024 (16:40 IST)
Updated Date: Wed, 14 Feb 2024 (17:05 IST)
ಬೆಂಗಳೂರು-ಶಾಸಕ ಗೋಪಾಲಯ್ಯಗೆ ಅವಾಚ್ಯ ಪದ ಬಳಕೆ, ಕೊಲೆ ಬೆದರಿಕೆ ಆರೋಪದಾಡಿ ಮಾಜಿ ಕಾರ್ಪೊರೇಟರ್ ಪದ್ಮರಾಜ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅಲ್ಲದೇ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರಿಂದ ಪದ್ಮರಾಜ್ ವಿಚಾರಣೆ ನಡೆಸಲಾಗ್ತಿದೆ.
ಪದ್ಮರಾಜ್ ವಿರುದ್ಧ ಗೋಪಾಲಯ್ಯ ರಿಂದ ಎಫ್ಐಆರ್ ಪ್ರಕರಣ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಪ್ರತಿಕ್ರಿಯಿಸಿದ್ದಾರೆ.ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದೀವಿ.ಆರೋಪಿಯನ್ನ ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗ್ತಿದೆ.ಇಬ್ಬರಿಂದಲೂ ಹೇಳಿಕೆ ಪಡೆದು ತನಿಖೆ ಮಾಡ್ತೀವಿ.ತನಿಖೆ ಪ್ರಾರಂಭ ಹಂತದಲ್ಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಹೇಳಿದ್ದಾರೆ.