Select Your Language

Notifications

webdunia
webdunia
webdunia
webdunia

ಒರಾಯನ್‌ ಮಾಲ್‌ ನಲ್ಲಿ ಶಾಸಕರಿಗೆ ಉಚಿತ ಅನ್ನ ಪ್ರದರ್ಶನ

 ಯು.ಟಿ.ಖಾದರ್‌

geetha

bangalore , ಮಂಗಳವಾರ, 13 ಫೆಬ್ರವರಿ 2024 (20:20 IST)
ಬೆಂಗಳೂರು : ಫೆ. 14 ರಂದು ಒರಾಯನ್‌ ಮಾಲ್‌ ನಲ್ಲಿ ಅನ್ನಭಾಗ್ಯ ಯೋಜನೆಯ ಹಿರಿಮೆ ಸಾರುವ “ಅನ್ನ” ಎಂಬ ಕನ್ನಡ ಸಿನಿಮಾ ವಿಶೇಷ ಪ್ರದರ್ಶನ ಕಾಣಲಿದೆ. ವಿಧಾನಸಭೆಯ ಸದಸ್ಯರಿಗಾಗಿ ಮಾತ್ರ ಈ ಪ್ರದರ್ಶನವನ್ನು ಕರ್ನಾಟಕ ಸರ್ಕಾರದಿಂದ ಆಯೋಜಿಸಲಾಗಿದ್ದು, ಸಭಾಪತಿ ಯು.ಟಿ.ಖಾದರ್‌ ಮಂಗಳವಾರ ಬಜೆಟ್‌ ಅಧಿವೇಶನದ ವೇಳೆ ಪ್ರಕಟಣೆ ಹೊರಡಿಸಿದರು. ಆನೂರು ಚೆನ್ನಪ್ಪ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಚನ್ನಪ್ಪ ಅವರ ಕಥೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿತ್ತು. 

ಗಗನ್‌ ಪಿಕ್ಚರ್ಸ್‌ ವತಿಯಿಂದ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಎನ್‌ ಎಸ್‌ ಇಸ್ಲಾಹುದ್ದೀನ್‌  ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.  


Share this Story:

Follow Webdunia kannada

ಮುಂದಿನ ಸುದ್ದಿ

ನಮ್ದೇ ಸರ್ಕಾರ ಈ ಬಾರಿಗೂ... ಇದಕ್ಕೆ ಕಾರಣ ಅದೊಂದೇ.....?