Publish Date: Fri, 16 Feb 2024 (20:43 IST)
Updated Date: Fri, 16 Feb 2024 (19:28 IST)
ಬೆಂಗಳೂರು- ಹಾಡಹಗಲೆ ಮನೆಗೆ ನುಗ್ಗಿ ಧಾಂದಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.ಶಾಂತಿ ನಗರದಲ್ಲಿ ರಾಜ್ ಕುಮಾರ್ ಸೇರಿದ ಮನೆಯ ಕಿಟಕಿ, ಬಾಗಿಲು, ಗೋಡೆಗಳನ್ನು ಕೆಡವಿ ಹಾಕಲಾಗಿದೆ ಎಂದು ಮಾಜಿ ಕಾಪೋರೇಟರ್ ಸೌಮ್ಯ ಶಿವಕುಮಾರ್ ತಂದೆಯ ವಿರುದ್ಧ ಆರೋಪ ಮಾಡಲಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ 1ಕೋಟಿ .40 ಲಕ್ಷಕ್ಕೆ ಮನೆ ರಾಜ್ ಕುಮಾರ್ ಮಾರಾಟ ಮಾಡಿದ್ರು.40 ಲಕ್ಷ ಅಡ್ವಾಂಸ್ ಪಡೆದಿದ್ದ ರಾಜ್ ಕುಮಾರ್ ಉಳಿದ ಹಣಕ್ಕೆ ಚೆಕ್ ನೀಡಿದ್ರು.ಮನೆಯ ಮೇಲೆ ರಾಜ್ಕುಮಾರ್ ಸಂಬಂದಿ ಕೇಸ್ ದಾಖಲಸಿದ್ರು.ಹಣ ಕೇಳಲು ಹೋದಾಗ ಕೇಸ್ ಕ್ಲೀಯರ್ ಮಾಡುವಂತೆ ಸೌಮ್ಯ ಶಿವಕುಮಾರ್ ತಂದೆ ಪಾರ್ಥ ಸಾರಥಿ ಹೇಳಿದ್ರು.ಕೇಸ್ ಕ್ಲೀಯರ್ ಆದ ಮೇಲೆ ಹಣ ಕೊಡದೆ ದಾಂದಲೆ ಮಾಡಿದ್ದು,ಮನೆಯಲ್ಲಿ ರಾಜ್ ಕುಮಾರ್ ಕುಟುಂಬ ದವರ ಮೇಲೆ ಹಲ್ಲೆ ಮಾಡಿದ್ದರೆಂದು ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.